Friday, May 17, 2024

ಅಯೋಧ್ಯೆ ಯಾತ್ರಿಕರಿದ್ದ ರೈಲಿನಲ್ಲಿ ಅನ್ಯ ಕೋಮಿನ ಯುವಕರ ದಾಂಧಲೆ

ವಿಜಯನಗರ : ಅಯೋಧ್ಯೆಯಿಂದ ವಾಪಾಸಾಗುತ್ತಿದ್ಧ ರೈಲಿನ ಎರಡನೇ ಬೋಗಿಗೆ ನುಗ್ಗಿದ ಅನ್ಯ ಕೋಮಿನ ಮೂವರು ಯುವಕರು ದಾಂಧಲೆ ನಡೆಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದ ಕೂಡಲೇ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ರೈಲು ಹತ್ತುತ್ತಿದ್ದ ಯುವಕರಿಗೆ ಬೋಗಿ ಒಳಗಿದ್ದ ಹಿಂದೂಗಳು ಇದು ಹಿಂದೂಗಳಿಗೆ ಮಾತ್ರ ಎಂದು ಹೇಳಿ ಅಡ್ಡಿಪಡಿಸಿದ್ದರು. ಇದರಿಂದ ಕೋಪಗೊಂಡ ಯುವಕರು, ಬೋಗಿಗೆ ಬೆಂಕಿ ಹಚ್ಚುವುದಾಗಿ ಧಮ್ಕಿ ಹಾಕಿದ್ದಾರೆ.

ರೈಲಿನಲ್ಲಿ ಸುಮಾರು 1,500ಕ್ಕೂ ಅಧಿಕ ಪ್ರಯಾಣಿಕರಿದ್ದರು. ಸುಮಾರು 2 ಗಂಟೆ ಅಯೋಧ್ಯೆ ರೈಲು ನಿಲ್ಲಿಸಿ ದಾಂಧಲೆ ಮಾಡಿದ್ದಾರೆ. ಈ ವೇಳೆ ಯಾತ್ರಿಕರು ಯುವಕರನ್ನ ರೈಲ್ವೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಿದ ನಂತರ ಅಯೋಧ್ಯೆ ರೈಲು ಚಲಿಸಿದೆ.

ಸತತ 11ನೇ ದಿನ ಸಂಚರಿಸುತ್ತಿರುವ ಟ್ರೈನ್

ಮೈಸೂರು ಹಾಗೂ ಅಯೋಧ್ಯೆ ಧಾಮ ಟ್ರೈನ್ ಸತತ 11ನೇ ದಿನ ಅಯೋಧ್ಯೆಗೆ ಸಂಚರಿಸುತ್ತಿತ್ತು. ಇಂದು ಮಾತ್ರ ಈ ರೀತಿಯ ಘಟನೆ ನಡೆದಿದೆ. ಹೀಗಾಗಿ, ಬೋಗಿಗಳ ಜೊತೆಗೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ತೆರಳಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಅಯೋಧ್ಯೆಯ ಭಕ್ತಾದಿಗಳು ಪ್ರತಿಭಟನೆ ಮಾಡಿದ್ದಾರೆ. ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿ.ಎಲ್ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES