Sunday, May 12, 2024

ಬಿಜೆಪಿಗೆ ಹಿಂದೂಗಳ ಬಗ್ಗೆ ಎಲ್ಲಿಲ್ಲದ ಪ್ರೇಮ ಉಕ್ಕಿ ಬರುತ್ತದೆ : ರಾಮಲಿಂಗಾರೆಡ್ಡಿ

ಬೆಂಗಳೂರು : ಚುನಾವಣೆ ಹತ್ತಿರ ಬಂತು ಎಂದರೆ ಮಾತ್ರ ಬಿಜೆಪಿಗೆ ಹಿಂದೂಗಳ ಬಗ್ಗೆ ಎಲ್ಲಿಲ್ಲದ ಪ್ರೇಮ ಉಕ್ಕಿ ಬರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕುಟುಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ. ಅವರಿಗೆ ಕಾನೂನಿನ ಅರಿವಿಲ್ಲ ಎಂಬುದು ಅವರು ಮಾತನಾಡುವ ರೀತಿಯಲ್ಲೇ ತಿಳಿಯುತ್ತದೆ ಎಂದು ಛೇಡಿಸಿದ್ದಾರೆ.

ಹಣಗೆರೆ ಶ್ರೀ ಭೂತಾರಾಯ ಚೌಡೇಶ್ವರಿ ದೇವಸ್ಥಾನ (ಸೈಯದ್ ಸಾದಾತ್ ದರ್ಗಾ) ಹಾಗೂ ಬಾಬು ಬುಡನ್ ಗಿರಿಯಲ್ಲಿ ಮಾತ್ರ ಹಿಂದಿನಿಂದಲೂ ಎರಡು ಧರ್ಮದವರಿಗೂ ಅವಕಾಶ ಇದೆ. ಬಿಜೆಪಿ ಸರ್ಕಾರವಿದ್ದಾಗಲೂ ಕೂಡ ಅನ್ಯ ಧರ್ಮದವರನ್ನು ನೇಮಕ ಮಾಡಿದ್ದಾರೆ ಎಂಬುದನ್ನು ಅವರು ಮರೆತಂತಿದೆ ಎಂದು ಹೇಳಿದ್ದಾರೆ.

40% ಕಮಿಷನ್ ಹೊಡೆಯುವುದರಲ್ಲೇ ಕಾಲ ಕಳೆದ್ರು

ಇವರು ಕಳೆದ 4 ವರ್ಷಗಳ ಅಧಿಕಾರಾವಧಿಯಲ್ಲಿ 40% ಕಮಿಷನ್ ಹೊಡೆಯುವುದರಲ್ಲೇ ಕಾಲ ಕಳೆದರು. ಹಿಂದೂ ದೇವಾಲಯಗಳು ಹಾಗೂ ಅದರ ಅರ್ಚಕರು, ಸಿಬ್ಬಂದಿ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು ಮಾತ್ರ ಶೂನ್ಯ. ಕಳೆದ 8 ತಿಂಗಳಿನಲ್ಲಿ ನಮ್ಮ ಕಾಂಗ್ರೆಸ್​ ಸರ್ಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ನೀಡಿರುವ ವಿವಿಧ ಕೊಡುಗೆಗಳಲ್ಲಿ ಶೇ.25% ರಷ್ಟು ಸಹ ಬಿಜೆಪಿಯವರು ನೀಡಿಲ್ಲ ಎಂದು ಚಾಟಿ ಬೀಸಿದ್ದಾರೆ.

ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು

ಧರ್ಮದ ವಿಚಾರಗಳಲ್ಲಿ ಸತ್ಯ ಮರೆಮಾಚಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಮೂಲಕ ಹಿಂದೂಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ದ್ವಿಮುಖ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES