Saturday, September 28, 2024

ಸಿದ್ದರಾಮಯ್ಯ ಬಳಿ ದುಡ್ಡು ಇಲ್ಲ, ಸುಳ್ಳು ಬಜೆಟ್ ಮಂಡಿಸುತ್ತಾರೆ : ಶೋಭಾ ಕರಂದ್ಲಾಜೆ

ಉಡುಪಿ : ಸಿಎಂ ಸಿದ್ದರಾಮಯ್ಯ ಬಳಿ ದುಡ್ಡು ಇಲ್ಲ, ನಾಳೆ ಅವರು ಸುಳ್ಳು ಬಜೆಟ್ ಘೋಷಣೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಸಿದ್ದರಾಮಯ್ಯ 15ನೇ ದಾಖಲೆಯ ಬಜೆಟ್ ಮಂಡನೆ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು, ಬೊಕ್ಕಸದ ಹಣವನ್ನು ಗ್ಯಾರಂಟಿಗೆ ಖರ್ಚು ಮಾಡಿದ್ದಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳು ಕೂಡ ನಡೆಯುತ್ತಿಲ್ಲ. ಉಚಿತ ಬಸ್ ಎಂದು ಹೇಳಿ 80% ಬಸ್ ನಿಲ್ಲಿಸಿದ್ದಾರೆ. ಬಸ್ಸಿಗೆ ಡೀಸೆಲ್ ಹಾಕಲು ಹಣ ಇಲ್ಲ, ಸಂಬಳ ಕೊಡಲು ಹಣ ಇಲ್ಲ. ನ್ಯಾಯಾಧೀಶರಿಗೆ ಎರಡು ತಿಂಗಳು ತಡವಾಗಿ ಸಂಬಳ ಕೊಟ್ಟಿದ್ದಾರೆ. ಚುನಾವಣೆಯ ಉದ್ದೇಶವಾಗಿಟ್ಟುಕೊಂಡು ಮಂಡಿಸುವ ಸುಳ್ಳು ಬಜೆಟ್ ಎಂದು ಲೇವಡಿ ಮಾಡಿದರು.

ಅವ್ರು ಹಿಜಾಬ್ ಧರಿಸಬಹುದು, ನಾವು ತಿಲಕ ಇಡಬಾರದಾ?

ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದು ರಾಜ್ಯದ ಮಿಷನರಿ ಕಾಂಗ್ರೆಸ್ ಸರ್ಕಾರದ ಅಂಧಾ ದರ್ಬಾರ್. ಇಲ್ಲಿ, ಒಂದು ಕೋಮಿನ ವಿದ್ಯಾರ್ಥಿಗಳು ಹಿಜಾಬ್(ಬುರ್ಖಾ) ಧರಿಸಬಹುದು. ಆದರೆ, ಹಿಂದೂ ವಿದ್ಯಾರ್ಥಿಗಳು ಕೈಬಳೆ ಧರಿಸುವಂತಿಲ್ಲ, ಹೂ ಮುಡಿಯುವಂತಿಲ್ಲ, ಹಣೆ ಬೊಟ್ಟು(ತಿಲಕ) ಇಡುವಂತಿಲ್ಲ ಎಂದು ಛೇಡಿಸಿದ್ದಾರೆ.

ಪ್ರಾರ್ಥನೆಗಾಗಿ ಪರೀಕ್ಷಾ ಸಮಯವನ್ನೇ ಬದಲಿಸುತ್ತಾರೆ

ಇಲ್ಲಿ, ಒಂದು ಕೋಮಿನ ವಿದ್ಯಾರ್ಥಿಗಳ ಪ್ರಾರ್ಥನೆಗಾಗಿ ಪರೀಕ್ಷಾ ಸಮಯವನ್ನೇ ಬದಲಾಯಿಸಬಹುದು. ಆದರೆ, ಹಿಂದೂ ವಿದ್ಯಾರ್ಥಿಗಳು ಶಾರದಾ ಪೂಜೆ, ಗಣೇಶ ಪೂಜೆ ಮಾಡುವಂತಿಲ್ಲ. ಇಲ್ಲಿ, ಮಿಷನರಿ ಬೆಂಬಲಿತ ಶಿಕ್ಷಕರು ಹಿಂದೂ ಧರ್ಮದ ಅವಹೇಳನ ಮಾಡಬಹುದು. ಆದರೆ, ಬಿಜೆಪಿ ಶಾಸಕರು ಅದನ್ನು ಪ್ರಶ್ನಿಸುವಂತಿಲ್ಲ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES