ಚಿಕ್ಕಬಳ್ಳಾಪುರ : ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಇದುವರೆಗೂ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಹೋಗಿರುವ ಉದಾಹರಣೆಯೇ ಇಲ್ಲಾ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹಾಲಿ ಶಾಸಕ ಪ್ರದೀಪ್ ತಮ್ಮ ನಡೆಯಿಂದ ನಗೆಪಾಟಲಿಗೆ ಈಡಾಗುವಂತೆ ಮಾಡಿದ್ದಾರೆ. ಒಬ್ಬ ಶಾಸಕರಾದವರು ಬಿಗ್ಬಾಸ್ಗೆ ಹೋದ ಇತಿಹಾಸವಿಲ್ಲ.
ಇದನ್ನೂ ಓದಿ: ಇಂದು ಕೂಡ ರಾಜ್ಯದ ಹಲವೆಡೆ ಮಳೆ ಸಾಧ್ಯತೆ!
ನಾವು ನಮ್ಮ ಚಿಕ್ಕಬಳ್ಳಾಪುರವನ್ನು ಇದುವರೆಗೆ ಕಳಶಪ್ರಾಯವಾಗಿ ಇಟ್ಟಿದ್ದೇವು. ಆದರೇ, ಶಾಸಕ ಪ್ರದೀಪ್ ಈಶ್ವರ್ ಅವರು ಈಗ ತಮ್ಮ ನಡೆಯಿಂದಾಗಿ ಇಡೀ ರಾಜ್ಯದ ಜನೆತೆಗೆ ಆಹಾರವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.