Monday, May 20, 2024

ಅ.15ರಿಂದ ತಿಮ್ಮಪ್ಪನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ

ಬೆಂಗಳೂರು : ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ಶ್ರೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಈ ಬಾರಿಯ ನವರಾತ್ರಿ ಬ್ರಹ್ಮೋತ್ಸವಗಳು ಅಕ್ಟೋಬರ್ 15 ರಿಂದ 23ರವರೆಗೆ ವೈಭವವಾಗಿ ನಡೆಯಲಿದೆ.

ಚಂದ್ರಮಾನದ ಪ್ರಕಾರ, ಈ ಬಾರಿ ಅಧಿಕಮಾಸ ಬಂದಿರುವುದರಿಂದ ಎರಡು ಬಾರಿ ಬ್ರಹ್ಮೋತ್ಸವಗಳು ನಡೆಯುತ್ತವೆ. ಹೀಗೆ ಬಂದ ಸಂದರ್ಭಗಳಲ್ಲಿ ಕನ್ಯಾಮಾಸ ಭಾದ್ರಪದಲ್ಲಿ ವಾರ್ಷಿಕ ಬ್ರಹ್ಮೋತ್ಸವಗಳು, ಆಶ್ವಯುಜಂಗಳಲ್ಲಿ ದಸರಾ ನವರಾತ್ರಿಗಳಲ್ಲಿ ನವರಾತ್ರಿ ಬ್ರಹ್ಮೋತ್ಸವಗಳನ್ನು ನಡೆಸುವುದು ಅನಿವಾರ್ಯವಾಗುತ್ತದೆ.

ಇದರ ಅಂಗವಾಗಿ ನಡೆಯುವ ನವರಾತ್ರಿ ಬ್ರಹ್ಮೋತ್ಸವದಲ್ಲಿ ಧ್ವಜಾರೋಹಣ ನಡೆಯಲಿರುವ ಅಕ್ಟೋಬರ್​ 19ರಂದು ಗರುಡ ವಾಹನ, 20ರಂದು ಪುಷ್ಪಕವಿಮಾನಂ, ಅಕ್ಟೋಬರ್​ 22ರಂದು ಸ್ವರ್ಣರಥ, 23ರಂದು ಚಕ್ರಸ್ನಾನ ನಡೆಯಲಿದೆ. ಬೆಳಗ್ಗೆ ವಾಹನ ಸೇವೆ 8 ರಿಂದ 10 ಗಂಟೆಗಳವರೆಗೆ, ರಾತ್ರಿ ವಾಹನ ಸೇವೆ 7 ರಿಂದ 9 ಗಂಟೆಯವರೆಗೆ ನಡೆಯುತ್ತದೆ.

ಗರುಡವಾಹನ ಸೇವೆ ರಾತ್ರಿ 7 ರಿಂದ 12 ಗಂಟೆಗಳವರೆಗೆ ನಡೆಯುತ್ತದೆ. ಈ ಬ್ರಹ್ಮೋತ್ಸವದಲ್ಲಿ ವಾಹನ ಸೇವೆ ವೈಶಿಷ್ಟ್ಯ ಹೀಗೆ ಇರಲಿದೆ. ನವರಾತ್ರಿ ಬ್ರಹ್ಮೋತ್ಸವಗಳಿಗೆ 14 ರಂದು ರಾತ್ರಿ 7 ಗಂಟೆಯಿಂದ 9 ಗಂಟೆಗಳವರೆಗೆ ಅಂಕುರಾರ್ಪಣ ನಡೆಯಲಿದೆ.

RELATED ARTICLES

Related Articles

TRENDING ARTICLES