Monday, May 20, 2024

ಸಿದ್ದರಾಮಯ್ಯ ಸರ್ಕಾರ ಲಜ್ಜೆಗೆಟ್ಟ ಆಡಳಿತ ನಡೆಸುತ್ತಿದೆ : ಗೋವಿಂದ ಕಾರಜೋಳ

ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಜ್ಜೆಗೆಟ್ಟ ಆಡಳಿತ ನಡೆಸುತ್ತಿದೆ. ಹಣ ಸಂಗ್ರಹ ಮಾಡುವುದಕ್ಕಾಗಿ ಈ ಸರ್ಕಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಗಳಲ್ಲಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರಾಯಿ ಅಂಗಡಿ ತೆರೆಯುತ್ತೇವೆ ಅಂತ ಹೊರಟಿದ್ದಾರೆ. ಮಾಲ್​ಗಳಲ್ಲಿ ಕೂಡ ಮಾರಾಟ ಮಾಡ್ತಾರಂತೆ ಎಂದು ಕುಟುಕಿದ್ದಾರೆ.

30 ಜಿಲ್ಲೆಗಳಲ್ಲಿ ಸಾರಾಯಿ ಮಾರಾಟ ಮಾಡಿ ಹೆಚ್ಚು ಹಣ ಬರ್ತಿದೆ. ಈ ರೀತಿ ಬೇಕಾಬಿಟ್ಟಿ ಸಾರಾಯಿ ಮಾರಾಟ ಮಾಡೋದು ಸರಿಯಲ್ಲ. ಕೂಡಲೇ ಇದನ್ನೆಲ್ಲಾ ನಿಲ್ಲಿಸಬೇಕು. ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಈ ರೀತಿ ಸಲಹೆ ಕೊಡ್ತಾರೆ ಅಂದ್ರೆ ಅವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧ ಬಾಡಿಗೆ ಕೊಟ್ರೂ ಅಚ್ಚರಿ ಇಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರಾಯಿ ನಿಷೇಧ ಮಾಡಬೇಕು. ಕ್ಲಬ್, ಪಬ್ ನಿಷೇಧ ಮಾಡಬೇಕು ಅಂತಿದೆ. ಆದ್ರೆ, ಈ ಸರ್ಕಾರಕ್ಕೆ ಗ್ಯಾರಂಟಿ ಅನುಷ್ಠಾನಕ್ಕೆ ಹಣ ಕಡಿಮೆ ಆಗಿದೆ ಅಂತ ಈ ರೀತಿ ನಿರ್ಧಾರ ತೆದುಕೊಂಡಿದ್ದಾರೆ. ಹೆಚ್ಚು ಹಣ ಬರುತ್ತೆ ಅಂತ ವಿಧಾನಸೌಧವನ್ನೇ ಬಾಡಿಗೆ ಕೊಟ್ರೂ ಅಚ್ಚರಿ ಇಲ್ಲ ಎಂದು ಗೋವಿಂದ ಕಾರಜೋಳ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES