Thursday, June 13, 2024

ವರದಕ್ಷಿಣೆಗಾಗಿ ತುಂಬು ಗರ್ಭಿಣಿಯನ್ನೇ ಕೊಂದ ಪಾಪಿ ಪತಿರಾಯ

ಮೈಸೂರು : ಕುಡಿದ ಮತ್ತಿನಲ್ಲೇ ಪತಿಯೇ ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಕೊಲೆಗೈದ ಅಮಾನವೀಯ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.

ಶೋಭಾ (26) ಮೃತ ದುರ್ದೈವಿ ಗರ್ಭಿಣಿ. ಮಂಜು ಅಲಿಯಾಸ್ ಮಂಜುನಾಥ್ ((27) ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿ. ವರದಕ್ಷಿಣೆ ಆಸೆಗಾಗಿ ಪತ್ನಿಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

8 ವರ್ಷಗಳ ಹಿಂದೆ ಮೃತ ಶೋಭಾ ಹಾಗೂ ಆರೋಪಿ ಮಂಜು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮೊದಮೊಲದು ಸಂಸಾರ ಚೆನ್ನಾಗಿಯೇ ಇತ್ತು. ಈ ದಂಪತಿಗೆ ಐದು ವರ್ಷದ ಗಂಡು ಮಗು ಇದ್ದಾನೆ. ಆದರೆ, ಇತ್ತೀಚೆಗೆ ಗಂಡ ಹೆಂಡತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ತವರು ಮನೆಯಿಂದ ಹಣ ತರುವಂತೆ ಆರೋಪಿ ಮಂಜು ಕಿರುಕುಳ ಕೊಡುತ್ತಿದ್ದ.

ಬ್ಲೇಡ್​ನಿಂದ ಕುತ್ತಿಗೆ ಕೊಯ್ದ ಪಾಪಿ

ತುಂಬು ಗರ್ಭಿಣಿಯಾಗಿದ್ದ ಮೃತ ಶೋಭಾ ಹೆರಿಗೆಯ ಆರೈಕೆಗಾಗಿ ತವರು ಮನೆಗೆ ಬಂದಿದ್ದರು. ತವರು ಮನೆಯಿಂದ ಗಂಡನ ಮನೆಗೆ ಪತ್ನಿ ಬರುತ್ತಿಲ್ಲ ಅಂತ ಜಗಳ ತೆಗೆದ ಈ ಪಾಪಿ ಪತಿರಾಯ. ಕುಡಿದ ಮತ್ತಿನಲ್ಲಿ ಆತುರದ ಕೈಗೆ ಬುದ್ದಿ ಕೊಟ್ಟು ಬ್ಲೇಡ್ ನಿಂದ ಪತ್ನಿ ಕುತ್ತಿಗೆ ಕೊಯ್ದುದಿದ್ದಾನೆ. ತಕ್ಷಣ ಶೋಭಾಳನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಫಲಿಸದೆ ಪತ್ನಿ ಸಾವು

ವೈದ್ಯರ ಸಲಹೆ ಮೇರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿಧಿ ಆಟ ಅಷ್ಟರಲ್ಲಾಗಲೇ ಚಿಕಿತ್ಸೆ ಫಲಿಸದೆ ತುಂಬು ಗರ್ಭಿಣಿ ಶೋಭಾ ಇಹಲೋಕ ತ್ಯಜಿಸಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಂಜನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES