Saturday, May 18, 2024

INDIA ಹೆಸರು ಬದಲಾವಣೆ ಪ್ರಸ್ತಾಪವೇ ಇಲ್ಲ : ಅನುರಾಗ್ ಠಾಕೂರ್ ಸ್ಪಷ್ಟನೆ

ನವದೆಹಲಿ : ಮುಂಬರುವ ಸಂಸತ್ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸುವ ಬಗ್ಗೆ ಹರಡುತ್ತಿರುವ ವದಂತಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಸುಳ್ಳುಸುದ್ದಿಗಳನ್ನು ಪ್ರತಿಪಕ್ಷಗಳೇ ಹರಡುತ್ತಿವೆ. ಕೇಂದ್ರ ಸರ್ಕಾರದ ಎದುರು ದೇಶದ ಹೆಸರನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ವದಂತಿಗೆ ತೆರೆ ಎಳೆದಿದ್ದಾರೆ. ಭಾರತ ಎಂಬ ಪದದೊಂದಿಗೆ ಪ್ರತಿಪಕ್ಷಗಳಿಗೆ ಏಕೆ ಇಷ್ಟೊಂದು ಸಮಸ್ಯೆ ಇದೆ? ಎಂದು ಪ್ರಶ್ನಿಸಿದ್ದಾರೆ.

ದೇಶದ ಹೆಸರು ಭಾರತ ಆಗಿರಬೇಕೋ ಅಥವಾ ಇಂಡಿಯಾ ಆಗಿರಬೇಕೋ ಎಂಬ ಬಗ್ಗೆ ಚರ್ಚೆಗಳು, ವಾದಗಳು ಮುಂದುವರೆದಿವೆ. ಸೆಪ್ಟೆಂಬರ್ 8 ರಿಂದ 10 ರವರೆಗೆ ನಡೆಯಲಿರುವ ಜಿ 20 ಸಭೆಯಲ್ಲಿ ಭಾರತದ ಅಧ್ಯಕ್ಷ ದ್ರೌಪದಿ ಮುರ್ಮು ಅವರು ಗಣ್ಯರಿಗೆ ಆಹ್ವಾನ ಪತ್ರವನ್ನು ಕಳುಹಿಸಿದಾಗ ಈ ವಿವಾದ ಪ್ರಾರಂಭವಾಗಿದೆ.

ಪತ್ರದ ಮೇಲೆ ‘ಭಾರತದ ರಾಷ್ಟ್ರಪತಿ’ ಎಂದು ಬರೆಯಲಾಗಿತ್ತು. ಇದರ ನಂತರ, ಪ್ರತಿಪಕ್ಷಗಳು ಈ ಹೆಸರಿನ ಬಗ್ಗೆ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದವು. ಈ ಎಲ್ಲದರ ನಡುವೆ, ವಿದೇಶಾಂಗ ಸಚಿವಾಲಯವೂ ಪ್ರಧಾನಿ ಮೋದಿಯವರ ಇಂಡೋನೇಷ್ಯಾ ಭೇಟಿಗೆ ಸಂಬಂಧಿಸಿದ ಅಧಿಸೂಚನೆಗಳಲ್ಲಿ ‘ಭಾರತದ ಪ್ರಧಾನಿ’ ಎಂದು ಉಲ್ಲೇಖಿಸಿದೆ.

RELATED ARTICLES

Related Articles

TRENDING ARTICLES