Thursday, May 16, 2024

ಬೆನ್ನಿಗೆ ಸರಳು ಚುಚ್ಚಿಕೊಂಡು ಗಿರಗಿಟ್ಲೆಯಂತೆ ಸುತ್ತಿದ ಯುವಕ

ಚಿಕ್ಕಮಂಗಳೂರು : ಗ್ರಾಮದಲ್ಲಿ ಮಾರಿಹಬ್ಬ ಆಚರಣೆ ಹಿನ್ನೆಲೆ ಬೆನ್ನಿಗೆ ಸರಳು ಚುಚ್ಚಿಕೊಂಡು ಪರಾಕಾಷ್ಠೆ ಮೆರೆದಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.

ದಂತಚೋರ ವೀರಪ್ಪನ್​ನ ಊರಾದ ಗೋಪಿನಾಥಂ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ಮಾರಿಹಬ್ಬ ಆಚರಣೆಯನ್ನು ಮಾಡಲಾಗಿದೆ. ದಿ.ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಕಟ್ಟಿಸಿದ ದೇಗುಲದಲ್ಲಿ ಈ ವಿಶೇಷ ಆಚರಣೆ ನಡೆಯುತ್ತದೆ.

ಇದನ್ನು ಓದಿ : ಬಿಎಸ್​ವೈ ಕಡೆಗಣಿಸಿದ್ದು ಬಿಜೆಪಿಗೆ ಶಾಪವಾಗಿದೆ : ರೇಣುಕಾಚಾರ್ಯ

ಈ ಹಿನ್ನೆಲೆ ಹತ್ತಾರು ಭಕ್ತರು ಸರಳು ಚುಚ್ಚಿಕೊಂಡು ಹಾಗೂ ಹಲವಾರು ಜನರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿ, ದೇವರ ಕೃಪೆಯಲ್ಲಿ ಭಾಗಿಯಾಗುತ್ತಾರೆ. ಈ ಭಾರಿಯು ಸಹ ಅದೇ ರೀತಿ ಯುವಕನೋರ್ವ ಬೆನ್ನಿಗೆ ಸರಳು ಚುಚ್ಚಿಕೊಂಡು ನೇತಾಡುತ್ತ ಗಿರಗಿಟ್ಲೆಯಂತೆ ಸುತ್ತಿದ್ದಾನೆ.

ಈ ಘಟನೆ ಕಂಡು ಭಕ್ತರು ಮೈನವಿರೇಳುವಂತೆ ಮಾಡಿದ್ದಾನೆ.

RELATED ARTICLES

Related Articles

TRENDING ARTICLES