Wednesday, July 3, 2024

ಹೋಟೆಲ್​ ನಲ್ಲಿ ಸ್ಟೀಮ್​ ಬ್ಲಾಸ್ಟ್​: ಕಾರ್ಮಿಕರಿಗೆ ಗಂಭೀರ ಗಾಯ!

ಬೆಂಗಳೂರು : ಹೋಟೆಲ್ ನಲ್ಲಿ‌ ಸ್ಟೀಮ್ ಬ್ಲಾಸ್ಟ್ ಆದ ಪರಿಣಾಮ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ ನಲ್ಲಿ ನಡೆದಿದೆ.

ಇದನ್ನೂ ಓದಿ: ತನಿಖೆಗೆ ಬಂದ ಅಧಿಕಾರಿಗಳ ಮುಂದೆ ತಹಶಿಲ್ದಾರ್​ ವಿರುದ್ದ ಆರೋಗಳ ಸುರಿಮಳೆ!

ಸ್ಟೀಮ್​ ಬ್ಲಾಸ್ಟ್​ ನಿಂದಾಗಿ ಐಶ್ವರ್ಯ,ಬಸಿಕುಮಾರ್, ಕಾರ್ತೀಕ್‌ ಮೂವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಹೋಟೆಲ್​ನ ಅಡುಗೆ ಸಾಮಗ್ರಿಗಳು ಅಸ್ತವ್ಯಸ್ತವಾಗಿ ಬಿದ್ದಿವೆ.

ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಜ್ಞಾನಭಾರತಿ ಪೊಲೀಸ್ ಠಾಣೆ ದಾಖಲಾಗಿದೆ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

RELATED ARTICLES

Related Articles

TRENDING ARTICLES