Sunday, May 12, 2024

ಭಾರಿ ಮಳೆ : ಜಲಪಾತ ವೀಕ್ಷಣೆಗೆ ಬ್ರೇಕ್ ಹಾಕಿದ ಜಿಲ್ಲಾಡಳಿತ

ಉತ್ತರ ಕನ್ನಡ : ಮಳೆಗಾಲದಲ್ಲಿ ಪ್ರಕೃತಿ ಹಾಗೂ ಜಲಧಾರೆ ತಾಣಗಳ ಸೊಬಗು ನೊಡೋದೆ ಚೆಂದ. ಆದರೆ, ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ಬ್ರೇಕ್​ ಹಾಕಿದೆ.

ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಉಡುಪಿ ಜಲಪಾತದಲ್ಲಿ ನಡೆದ ಘಟನೆಯ ಪರಿಣಾಮ ಜಲಪಾತಗಳ ತವರೂರು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳ ವಿಕ್ಷಣೆಗೆ ನೀಷೆಧ ಹೇರಲಾಗಿದೆ.

ಇದನ್ನು ಓದಿ : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ 158.81ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿ ಶೀಘ್ರ: ಸಿಎಂ

5 ವರ್ಷದಲ್ಲಿ 12 ಪ್ರವಾಸಿಗರ ಸಾವು

ಜಲಪಾತಗಳನ್ನು ವಿಕ್ಷಿಸಲು ಬಂದವರು ಸುಮ್ಮನೆ ಇರದೇ, ಆಳ ಅಗಲ ತಿಳಿಯದೆ ಮೋಜು ಮಸ್ತಿ ಮಾಡಲು ಹೋಗಿ ಸಾಕಷ್ಟು ಅವಾಂತರಗಳು ನೆಡೆದಿವೆ. ಈ ಎಲ್ಲ ಘಟನೆಯನ್ನ ಮುಂದಿಟ್ಟು ಈ ಬಾರಿ ಜಿಲ್ಲೆಯ ಪ್ರಸಿದ್ದ ತಾಣವಾಗಿರು ಮಾಗೋಡು, ಸಾತೋಡ್ಡಿ, ಉಂಚಳ್ಳಿ, ಬೆಣ್ಣೆಹೊಳೆ, ಶಿರ್ಲೆ, ಗೋಲಾರಿ, ವಿಭೂತಿ, ಅಪ್ಸರಕೊಂಡ ಸೇರಿ ಅನೇಕ ಜಲಪಾತಗಳ ವೀಕ್ಷಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ವಿಧಿಸಿದೆ.

RELATED ARTICLES

Related Articles

TRENDING ARTICLES