Sunday, May 19, 2024

ಹೊಗೇನಕಲ್ ಫಾಲ್ಸ್ ನಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

ಚಾಮರಾಜನಗರ : ಹೊಗೇನಕಲ್ ಫಾಲ್ಸ್ ನಲ್ಲಿ ಈಜಲು‌ ಹೋಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್ ನಲ್ಲಿ ನಡೆದಿದೆ.

ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಶಬರಿ (24) ಹಾಗೂ ಅಜಿತ್(26) ಮೃತ ಯುವಕರು ಎಂದು ತಿಳಿದುಬಂದಿದೆ.

ತಮಿಳುನಾಡಿನಿಂದ ಯುವಕರ ತಂಡವೊಂದು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿತ್ತು. ಮಲೈ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ 12 ಜನ ತಂಡ ಹೊಗೇನಕಲ್ ಫಾಲ್ಸ್ ನತ್ತ ಪಯಣ ಬೆಳೆಸಿತ್ತು. ಈ ವೇಳೆ ಈಜಲು‌ ಹೋಗಿ ಯುವಕರು ನೀರು ಪಾಲಾಗಿದ್ದಾರೆ.

12 ಸ್ನೇಹಿತರ ಪೈಕಿ ಇಬ್ಬರು ಯುವಕರು  ನೀರಿನಲ್ಲಿ‌ ಮುಳುಗಿ‌ ಸಾವನ್ನಪ್ಪಿದ್ದಾರೆ.ಮಾಹಿತಿ ತಿಳಿದ ಕೂಡಲೇ ಮಹದೇಶ್ವರ ಬೆಟ್ಟದ  ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES