Saturday, May 11, 2024

ಸೋಮವತಿ ಅಮಾವಾಸ್ಯೆ : ಪೂಜಾ ವಿಧಾನ, ಮಹತ್ವ, ಪರಿಹಾರ..!

ಬೆಂಗಳೂರು : ವರ್ಷದಲ್ಲಿ ಒಂದು ಅಥವಾ ಎರಡು ಅಮಾವಾಸ್ಯೆಗಳು ವಿಶೇಷವಾಗಿ ಸೋಮವಾರ ಬರುತ್ತವೆ. ಇಂತಹ ಅಪರೂಪದ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ.

ಅದರಂತೆ ಜುಲೈ 17ರಂದು ಸೋಮವಾರ ಸೋಮವತಿ ಅಮಾವಾಸ್ಯೆ ಇರುತ್ತದೆ. ಇದು ವಿಶೇಷ ಮಹತ್ವವನ್ನು ಹೊಂದಿದೆ. ಅಮಾವಾಸ್ಯೆ ಯಾವಾಗ ಪ್ರಾರಂಭ, ಪೂಜಾ ವಿಧಾನ, ನೈವೇದ್ಯ ಕುರಿತು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ಸೋಮವತಿ ಅಮಾವಾಸ್ಯೆಯ ಪೂಜಾ ವಿಧಾನಗಳು

ಇದನ್ನೂ ಓದಿ : ವಾರಾಹಿ ನವರಾತ್ರಿ : ಆಷಾಢ ಮಾಸದಲ್ಲಿ ಆಚರಿಸುವ ‘ಗುಪ್ತ ನವರಾತ್ರಿ’ಯ ಮಹತ್ವವೇನು?

ಸೋಮವತಿ ಅಮಾವಾಸ್ಯೆ ದಿನ ಏನು ಮಾಡಬೇಕು?

ದೇವರಿಗೆ ಏನು ನೈವೇದ್ಯ ಮಾಡಬೇಕು?

ಪ್ರಕೃತಿಯೊಂದಿಗೆ ಹೆಚ್ಚು ಕಾಲವನ್ನು ಕಳೆಯಿರಿ

ಸೋಮಾವತಿ ಅಮಾವಾಸ್ಯೆಯು ಈ ವರ್ಷದ ಎರಡನೇ ಅಮಾವಾಸ್ಯೆಯಾಗಿದೆ. ಈ ದಿನ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಿಳೆಯರು ತಮ್ಮ ಪತಿ ಹಾಗೂ ಕುಟುಂಬದವರ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ.

ಸೋಮವತಿ ಅಮಾವಾಸ್ಯೆ ದಿನ ವಿಶೇಷವಾಗಿ ದಶಮಹಾ ವಿದ್ಯೆಯಲ್ಲಿ ಶ್ರೀ ಕಾಳಿದೇವಿಯ ಆರಾಧನೆ ಮಾಡಬೇಕು. ಶ್ರೀಮಠದಲ್ಲಿ ವಿಶೇಷ ಆರಾಧನೆ ಇರುತ್ತದೆ. ಭಕ್ತರೆಲ್ಲರೂ ಭಾಗವಹಿಸಬಹುದು ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES