Sunday, May 12, 2024

ವಿಷ ಸೇವಿಸಿ ಸಾರಿಗೆ ಸಚಿವರ ವಿರುದ್ದ ಚಾಲಕನ ಆಕ್ರೋಶ

ಬೆಂಗಳೂರು : ವರ್ಗಾವಣೆಗೆ ಮನನೊಂದು ಸಾರಿಗೆ ಬಸ್ ಚಾಲಕ ವಿಷ ಸೇವಿಸಿ ಸಾರಿಗೆ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಎಸ್ಆರ್​ಟಿಸಿ ಡಿಪೋದ ಚಾಲಕ ಜಗದೀಶ್ ಎಂಬುವವರು ಸಾರಿಗೆ ಸಚಿವರಿಗೆ ಬಾಯಿಗೆ ಬಂದಂತೆ ಬೈಯ್ದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡಿರುವ ಕಾರಣಕ್ಕಾಗಿ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಚಾಲಕ ಅಧಿಕಾರಿಗಳ ವಿರುದ್ದ ಆರೋಪಿಸಿದ್ದಾನೆ.

ಅಲ್ಲದೆ ಈ ಚಾಲಕನ ವಿರುದ್ದ ಮಹಿಳಾ ನಿರ್ವಾಹಕಿಯ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿರುವ ದೂರುಗಳು ಕೇಳಿ  ಬಂದಿದ್ದವು. ಆ ದೂರಿನ ಹಿನ್ನೆಲೆಯಲ್ಲಿ ಚಾಲಕ ಜಗದೀಶನನ್ನು ಮದ್ದೂರಿನ ಡಿಪೋಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ : ನಮ್ಗೆ 40% ಕಮಿಷನ್ ಅಂತಿದ್ರು, ಇವರದು 100% ಸರ್ಕಾರ : ರವಿಕುಮಾರ್ ಪಂಚ್

ಆದರೆ ವಿಷವನ್ನು ಸೇವಿಸಿರುವ ಜಗದೀಶ್ ಬೇರೆಯ ಕಾರಣಗಳನ್ನೇ ಹೇಳಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಇಲಾಖೆಯ ಸಚಿವರ ವಿರುದ್ದ ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ.

ವಿಷ ಸೇವಿಸಿರುವ ಜಗದೀಶ್​ಗೆ ನಾಗಮಂಗಲ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES