Friday, May 17, 2024

ಬಿಜೆಪಿಯವರು ಪುಂಗಿ ಆಟ ಆಡ್ತಿದ್ದಾರೆ : ಕೆ.ಎಂ ಶಿವಲಿಂಗೇಗೌಡ

ಹಾಸನ : ಬಿಜೆಪಿಯವರು ಪುಂಗಿ ಆಟ ಆಡ್ತಿದ್ದಾರೆ. 25 ಜನ ಸಂಸದರು ಇದ್ರೂ ಅಕ್ಕಿ ಕೊಡಿಸಲು ಆಗಲ್ವಾ? ಏನ್ ಪುಕ್ಕಟ್ಟೆ ಕೊಡ್ತಾರಾ? ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಕ್ಕಿ ಕೊಡಲು ತಾರತಮ್ಯ ಮಾಡಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 10 ಕಿಲೋ ಅಕ್ಕಿ ಕೊಡುತ್ತೇವೆ ಅಂತ ಆಶ್ವಾಸನೆ ಕೊಟ್ಟಿತ್ತು. ಈಗ ಒಂದೊಂದಾಗಿ ಗ್ಯಾರಂಟಿಗಳನ್ನು ಕೊಡಲು ಪ್ರಾರಂಭ ಮಾಡಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿವಿ ಅಂತ ಹೇಳಿ ಈಗ ವರಸೆ ಬದಲಿಸಿದ್ದಾರೆ. ಇದು ರಾಜಕೀಯ ಕುತಂತ್ರ, ನಾವು ಅಕ್ಕಿಯನ್ನು ಸಂಪೂರ್ಣವಾಗಿ ಕೊಟ್ಟರೆ ಕಾಂಗ್ರೆಸ್‌ನವರಿಗೆ ಹೆಸರು ಬರುತ್ತೆ. ರಾಜಕೀಯವಾಗಿ ಬೆಳೆದು ಹೋಗ್ತಾರೆ, ಜನರ ಬೆಂಬಲ ಗಳಿಸುತ್ತಾರೆ ಎಂಬ ದೃಷ್ಟಿ. ಹೀಗಾಗಿ, ಅನ್ನಭಾಗ್ಯ ಫೇಲ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಪ್ರವತ್ತಿ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಚೇಲಾಗಿರಿ ಮಾಡಿ ಪ್ರತಾಪ್ ಸಿಂಹಗೆ ಅನುಭವವಿರಬೇಕು: ಎಂ.ಬಿ ಪಾಟೀಲ್

ಲೋಕಸಭೆಯಲ್ಲಿ ಜನ ಉತ್ತರ ಕೊಡ್ತಾರೆ

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ಇವರು ಮಾಡುತ್ತಿರುವ ದೋಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರ ಕೊಡ್ತಾರೆ. ಬಿಜೆಪಿಯವರು ಪುಂಗಿ ಆಟ ಆಡ್ತಿದ್ದಾರೆ. ಇವರು ಮುಂದಿನ ಚುನಾವಣೆಯಲ್ಲಿ ವೋಟು ಕೇಳಲಿ. ನಾವು ಅಕ್ಕಿ ಕೊಟ್ಟೇ ಕೊಡ್ತಿವಿ. ಛತ್ತಿಸ್‌ಗಡ, ಪಂಜಾಬ್‌ನಿಂದ ಅಕ್ಕಿ ತಂದು ಕೊಟ್ಟೇ ಕೊಡ್ತಿವಿ, ಅದೇನು ಆಗುತ್ತೆ ಆಗಲಿ. ಒಂದು ತಿಂಗಳು ಮುಂದೆ ಹೋಗಬಹುದು. ಅಕ್ಕಿ ಕೊಡುವುದಂತು ಗ್ಯಾರಂಟಿ ಎಂದು ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ಶಾಮೀಲಾಗಿದೆ

ಚುನಾವಣೆಯಲ್ಲಿ ಇವರನ್ನು ಕೇಳಿ ಘೋಷಣೆ ಮಾಡಬೇಕಿತ್ತಾ? ಏನ್ ಪುಕ್ಕಟ್ಟೆ ಕೊಡ್ತಿರಾ, ದುಡ್ಡು ತಗೊಂಡು ಅಕ್ಕಿ ಕೊಡಿ. ನಮ್ಮ ಪಾರ್ಟಿ, ನಮ್ಮ ಇಷ್ಟ. ಘೋಷಣೆ ಮಾಡ್ಕೊತೀವಿ. ಎಲ್ಲರಿಗೂ ಕೈಗೂ ಅಕ್ಕಿ ಕೊಟ್ಟರೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿ ಆಗಲ್ಲ, ಕಡಿಮೆ ಆಗುತ್ತೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕೇಂದ್ರ ಸರ್ಕಾರದೊಂದಿಗೆ ಶಾಮೀಲಾಗಿದೆ ಎಂದು ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES