Monday, May 20, 2024

Ashada Masa : ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು ಏಕೆ ಗೊತ್ತಾ? 

ಬೆಂಗಳೂರು : ಸಾಂಪ್ರದಾಯದ ಪ್ರಕಾರ ಆಷಾಢ ಮಾಸವನ್ನು ಶೂನ್ಯ ಮಾಸ, ಅಮಂಗಳಕರ ಮಾಸವೆಂದೂ ಕರೆಯುತ್ತಾರೆ. ಆದರೆ ನಮ್ಮ ಹಿಂದೂ ಸಂಸ್ಕೃತಿಯ ಪ್ರತಿಯೊಂದು ಆಚರಣೆಯ ಹಿಂದೆಯೊಂದು ಮಹತ್ವದ ಕಾರಣವಂತೂ ಇದ್ದೇ ಇರುತ್ತದೆ.

ಹೌದು, ನಮ್ಮ ಪೂರ್ವಿಕರು ದೈವಿಕ ಕಾರಣಗಳನ್ನೂ ನೀಡಿ ಶುಭ ಕಾರ್ಯಗಳಿಗೆ ತಡೆಯಾಜ್ಞೆ ಹೇರಿದ್ದರೂ ಇದರ ಹಿಂದೆಯೂ ಒಂದು ಕಾರಣವಿರಬಹುದು. ಈ ಮಾಸದಲ್ಲಿ ಹೆಚ್ಚು ಮಳೆ ಬರುವುದು ಇದಕ್ಕೆ ಒಂದು ಕಾರಣವಿರಬಹುದು. ಅಂದ್ರೆ ಈ ಸಂಪ್ರದಾಯವನ್ನೂ ಕೆಲವರು ಫಾಲೋ ಮಾಡಬಹುದು ಇಲ್ಲವೇ ಆಗಿ ಕೂಡ ಇರಬಹುದು.

ಇದನ್ನೂ ಓದಿ : ವಾರಾಹಿ ನವರಾತ್ರಿ : ಆಷಾಢ ಮಾಸದಲ್ಲಿ ಆಚರಿಸುವ ‘ಗುಪ್ತ ನವರಾತ್ರಿ’ಯ ಮಹತ್ವವೇನು?

ಇನ್ನೂ ಈ ಆಷಾಢದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಅತ್ತೆಯ ಮನೆಯಲ್ಲಿ ಇರಬಾರದು ತನ್ನ ತವರಿಗೆ ಹೋಗಬೇಕು ಎಂಬ ನಂಬಿಕೆ ಇದೆ. ಹಾಗಾಗಿ ಈ ಸೊಸೆಯನ್ನು ಆಷಾಢ ಮುಗಿಯುವರೆಗೂ ತವರುಮನೆಗೆ ಕಳುಹಿಸುವ ಸಂಪ್ರದಾಯ ನಮ್ಮಲಿದೆ.

ಸಾಂಪ್ರದಾಯಿಕ ಆಚರಣೆಯಲ್ಲಿ ನವ ವಧು ಯಾಕೆ ಗಂಡನ ಮನೆಯಲ್ಲಿ ಇರಬಾರದು ಇಲ್ಲಿದೆ ನೋಡಿ ಕಾರಣ 

ಮದುವೆಯಾದ ನವ ವಧು ಮತ್ತು ಅತ್ತೆ ಒಂದೇ ಹೊಸ್ತಿಲು ದಾಟಬಾರದು. ಈ ರೀತಿ ನಡೆದ್ರೆ ಮುಂದೆ ಇಬ್ಬರ ಬಾಂಧವ್ಯದಲ್ಲಿ ಮನಸ್ತಾಪ ಉಂಟಾಗಬಹುದು. ಹಾಗಾಗಿ ವಧುವನ್ನು ತವರಿಗೆ ಕಳಿಸಿಕೊಡುತ್ತಾರೆ.

ಆಷಾಢಮಾಸದಲ್ಲಿ ಹೊಸದಾಗಿ ಮದ್ವೆಯಾದ ಹೆಣ್ಣು ಮಕ್ಕಳು ಇಲ್ಲಿವೆ ಕೆಲವೊಂದು ಸಲಹೆಗಳು..

  • ಈ ಆಷಾಢಮಾಸ ಮದುವೆಯಾಗಿ ತವರಿಗೆ ಬಂದಿರುವ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸಬೇಕು. ಇದರಿಂದ ಆಷಾಢದ ಬಳಿಕ ಗಂಡನ ಮನೆಗೆ ಹಿಂದಿರುಗಿದಾಗ, ಈ ಕಾಲ್ಗೆಜ್ಜೆ ಸದ್ದು ತಾಯಿಗೆ ಮಗಳ ನೆನಪು ಮಾಡಿಸುತ್ತದೆ.
  • ಇನ್ನೂ ಆಷಾಢ ಮುಗಿಸಿ ಹೊರಟ ಮಗಳಿಗೆ ತವರು ಮನೆಯಿಂದ ಗೆಜ್ಜೆಗಳಿಲ್ಲದ ಕಾಲ್ ಚೈನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಮುಂದೆ ಗಂಡನ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬೇಕು ಎಂದು ಕೆಲವು ಭಾಗಗಳಲ್ಲಿ ಈ ಆಚರಣೆಯನ್ನು ಮಾಡತ್ತಾರೆ.
  •  ವಿಶೇಷವಾಗಿ ಆಷಾಢದಲ್ಲಿ ವಿಶೇಷ ಪೂಜೆಗಳನ್ನು ಸಹ ಮಾಡಿಸಲಾಗುತ್ತದೆ. ಶಕ್ತಿದೇವತೆಗಳಿಗೆ ವಿಶೇಷ ಪೂಜೆ್ಗಳು ಈ ಮಾಸದಲ್ಲಿ ನಡೆಯುತ್ತಾವೆ.
  • ಆಷಾಢದಲ್ಲಿ ಹೊಸ ಬಟ್ಟೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡಲ್ಲ. ಶುಭ ಕಾರ್ಯಕ್ರಮಗಳು ಸಹ ನಡೆಸುವುದಿಲ್ಲ

ಇವೆಲ್ಲಾ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇದನ್ನು ಕೆಲವರು ಆಚರಣೆ ಮಾಡುತ್ತಾರೆ. ಇನ್ನೂ ಕೆಲವರು ಮೂಡನಂಬಿಕೆಯೆಂದು ಯಾವುದೇ ಆಚರಣೆಯನ್ನು ಅನುಸರಿಸುವಿದಿಲ್ಲ. ಇದೆಲ್ಲಾ ಅವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ.

RELATED ARTICLES

Related Articles

TRENDING ARTICLES