Tuesday, May 21, 2024

ಜಾತಿ, ಧರ್ಮ ಎನ್ನದೆ ಎಲ್ಲರ ಸಮಗ್ರ ಅಭಿವೃದ್ಧಿ : ನವಲಿ ಹಿರೇಮಠ

ಬಾಗಲಕೋಟೆ : ರಾಜ್ಯ ವಿಧಾನಸಭಾ ಚುನಾವಣಾ ಮತದಾನಕ್ಕೆ ಕೇವಲ 5 ದಿನ ಬಾಕಿಯಿದ್ದು, ಚುನಾವಣಾ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಹುನಗುಂದ್ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಎಸ್.ಆರ್ ನವಲಿ ಹಿರೇಮಠ್ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.

ಹುನಗುಂದ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹವಾ ಜೋರಾಗಿದೆ. ಕೆಆರ್ ಪಿ ಪಕ್ಷದ ಅಭ್ಯರ್ಥಿ ಎಸ್ ಆರ್ ನವಲಿ ಹಿರೇಮಠ್ ಅವರು ಇಲಕಲ್  ನಗರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಮತಯಾಚನೆ ವೇಳೆ ಎಸ್.ಆರ್ ನವಲಿ ಹಿರೇಮಠ್ ಅವರಿಗೆ ಅಭೂತಪೂರ್ಣ ಬೆಂಬಲ ಸಿಗ್ತಿದ್ದು, ಕೆಆರ್ ಪಿ ಪಕ್ಷದ ಕಾರ್ಯಕರ್ತರಲ್ಲಿ ಗೆಲುವಿನ ಉತ್ಸಾಹ ಹೆಚ್ಚಿಸಿದೆ.

ಇದನ್ನೂ ಓದಿ : ನವಲಿ ಹಿರೇಮಠ್​ಗೆ ಭಾರೀ ಬೆಂ’ಬಲ’ : 300ಕ್ಕೂ ಹೆಚ್ಚು ‘ಮುಸ್ಲಿಂ ಮುಖಂಡರು’ ಕೆಆರ್​ಪಿ ಸೇರ್ಪಡೆ

ಕೆಆರ್ ಪಿ ಗೆಲುವು ನಿಶ್ಚಿತ

ಇಲಕಲ್ ನಗರದ ವಾರ್ಡ್ ನಂಬರ್ 14,15,16ರಲ್ಲಿ ಭರ್ಜರಿ ಮತಯಾಚನೆ ಮಾಡಿದರು. ಹೊದಲೆಲ್ಲಾ ಕೆಆರ್ ಪಿ ಪಕ್ಷ ಅಭ್ಯರ್ಥಿ ಎಸ್.ಆರ್ ನವಲಿ ಹಿರೇಮಠ್ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದ್ದು, ಹುನಗುಂದ್ ಮತಕ್ಷೇತ್ರದಲ್ಲಿ ಕೆಆರ್ ಪಿ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ನವಲಿ ಹಿರೇಮಠ್ ಹೇಳಿದರು.

ಜಾತಿ-ಧರ್ಮ, ಮೇಲು-ಕೀಳು ಎನ್ನದೆ ಎಲ್ಲರ ಸಮಗ್ರ ಅಭಿವೃದ್ಧಿಗಾಗಿ ಒಂದು ಅವಕಾಶ ನೀಡಿ. ಕೆಆರ್ ಪಿ ಪಕ್ಷ ನಿಮ್ಮ ಸಂಕಷ್ಟಗಳನ್ನೆಲ್ಲಾ ದೂರು ಮಾಡಲಿದೆ ಎಂದು ಎಸ್.ಆರ್ ನವಲಿ ಹಿರೇಮಠ ಭರವಸೆ ನೀಡಿದರು.

RELATED ARTICLES

Related Articles

TRENDING ARTICLES