ಬಾಲಿವುಡ್ ಹಿರಿಯ ನಟ, ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಅವರಿಗೆ ರೈತರ ಮೇಲೆ ಅಪಾರ ಕಾಳಜಿ, ಪ್ರೀತಿ, ಗೌರವ ಇದೆ. ಅನ್ನದಾತರ ಕಷ್ಟಗಳಿಗೆ ಅಮಿತಾಬ್ ಸ್ಪಂದಿಸುತ್ತಿರುತ್ತಾರೆ. ಈ ಹಿಂದೆ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿದ್ದ ಅಮಿತಾ ಬಚ್ಚನ್, ಇದೀಗ ಉತ್ತರ ಪ್ರದೇಶದ ರೈತರಿಗೆ ನೆರವಾಗಿದ್ದಾರೆ. ಉತ್ತರ ಪ್ರದೇಶದ 1,398 ರೈತರ ಸುಮಾರು 4 ಕೋಟಿ ರೂ ಸಾಲವನ್ನು ಅಮಿತಾಬ್ ಬಚ್ಚನ್ ತೀರಿಸಿದ್ದಾರೆ. ಈ ವಿಷಯವನ್ನು ತಮ್ಮ ಬ್ಲಾಗ್ ನಲ್ಲಿ ತಿಳಿಸಿರುವ ಅಮಿತಾಬ್ ಬಚ್ಚನ್, ರೈತರ ಸಾಲ ಪಾವತಿಸಿದ್ದು ನಂಗೆ ತೃಪ್ತಿ ತಂದಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡೋ ರೈತರಿಗೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ ಅಂತ ಹೇಳಿದ್ದಾರೆ.