Saturday, September 21, 2024

ಬೆಂಗಳೂರಿನಲ್ಲಿ ಮಿತಿ ಮೀರಿದ ಹನಿ ಟ್ರ್ಯಾಪ್

ಬೆಂಗಳೂರು : ಉತ್ತರ ಕರ್ನಾಟಕ ಮೂಲದ ಅವಿನಾಶ್ ಎಂಬಾತನಿಂದ ಲಕ್ಷಾಂತರ ರೂಪಾಯಿ ಎಗರಿಸಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಉತ್ತರ ಕರ್ನಾಟಕ ಮೂಲದ ಅವಿನಾಶ್ ಎಂಬಾತನಿಂದ ಲಕ್ಷಾಂತರ ರೂಪಾಯಿ ಎಗರಿಸಿದ್ದಾರೆ. ಅವಿನಾಶ್​​​ಗೆ ಸೋಷಿಯಲ್ ಮೀಡಿಯಾದಲ್ಲಿ ರಿಯಾ ಮಲ್ಹೋತ್ರಾ ಎಂಬ ಯುವತಿ ಪರಿಚಯ ಆಗಿದ್ದರು. ಮೊದಲು ಪೇಸ್ ಬುಕ್ ಮೂಲಕ ರಿಕ್ವೆಸ್ಟ್ ಕಳಿಸಿದ್ದ ರಿಯಾ ನಂತರ ಅವಿನಾಶ್ ಜೊತೆ ವಿಡಿಯೋ ಕಾಲ ಮತ್ತು ಚಾಟಿಂಗ್ ಮಾಡುತ್ತಿದ್ದರು. ಅದಲ್ಲದೇ, ಮುಂದೆ ಇಬ್ಬರು ನಗ್ನವಾಗಿ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಿದ್ದರು. ಈ ವಿಡಿಯೋವನ್ನು ಇಟ್ಟುಕೊಂಡೇ ಬ್ಲಾಕ್​ಮೇಲ್​ ಆರಂಭಿಸಿದ್ದಾಳೆ.

ಅದಲ್ಲದೇ, ಬ್ಲಾಕ್ ಮೇಲ್ ಮಾಡಿ ಅವಿನಾಶ್​ನಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ದ ಯುವತಿ ರಿಯಾ ಕೊಲೆಯಲ್ಲಿ ಅವಿನಾಶ್ ಕೈವಾಡವಿದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಸಿಬಿಐ ಅಧಿಕಾರಿ ಎಂದುಕೊಂಡು ರಾಹುಲ್ ಎಂಬಾತನಿಂದ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ವಿಚಾರಣೆಗೆಂದು ಕರೆದು ಹಂತ ಹಂತವಾಗಿ 5 ಲಕ್ಷ ಹಣ ವಸೂಲಿ ಮಾಡಿದ್ದಾರೆ. ವಂಚನೆ ಕುರಿತು ಸ್ನೇಹಿತರ ಸಹಕಾರದಿಂದ ಪೊಲೀಸರಿಗೆ ದೂರು ನೀಡಿದ ಅವಿನಾಶ್. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬಿಸಿದ್ದಾರೆ. ಆರೋಪಿಗಳಾದ ರಿಯಾ ಮತ್ತು ರಾಹುಲ್ ರಾಜಸ್ಥಾನ ಮೂಲದವರು ಎನ್ನಲಾಗಿದೆ.

RELATED ARTICLES

Related Articles

TRENDING ARTICLES