ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್ ಕಿಡ್ನಾಪ್ ಮಾಡಿದವರ ಜೊತೆಗೆ ಡೀಲ್ ಮಾತನಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಇದಕ್ಕೆ ಪೂರಕವಾದ ಆಡಿಯೋ ಒಂದು ಪವರ್ ಟಿವಿಗೆ ಲಭ್ಯವಾಗಿದೆ.
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಹತ್ಯೆಯಾದ ರೇಣುಕಾ ಸ್ವಾಮಿಯನ್ನ ಚಿತ್ರದುರ್ಗದಿಂದ ಕರೆದುಕೊಂಡು ಹೋಗಿದ್ದು 5 ಆರೋಪಿಗಳು ಅಂತಾ ಗೊತ್ತಾಗಿದೆ. ರವಿ, ಜಗದೀಶ್, ರಾಘವೇಂದ್ರ, ಅನು ಮತ್ತು ರಾಜ ಎಂದು ಹೇಳಲಾಗಿದೆ.
ಈ ಕುರಿತ ಆಡಿಯೋ ಪವರ್ ಟಿವಿಗೆ ಲಭ್ಯವಾಗಿದ್ದು, ಈ ಸಂಭಾಷಣೆಯಲ್ಲಿ ಶನಿವಾರ ಮಧ್ಯಾಹ್ನ ರೇಣುಕಾ ಸ್ವಾಮಿ ಜೊತೆ ಈ ಆರೋಪಿಗಳು ಬೆಂಗಳೂರು ತಲುಪಿದ್ರು. ಇವರು ನೇರವಾಗಿ ಶೆಡ್ಗೆ ಬರುವ ವೇಳೆಗೆ ಅಲ್ಲಿ ದರ್ಶನ್ ಗ್ಯಾಂಗ್ ಮೊಕ್ಕಾಂ ಹೂಡಿತ್ತು. ಬಳಿಕ ಗ್ಯಾಂಗ್ ಸೇರಿಕೊಂಡಿದ್ರಂತೆ ನಟ ದರ್ಶನ್. ಆತ ಬರೋವರೆಗೂ ರೇಣುಕಾ ಸ್ವಾಮಿ ಜೊತೆ ಕಿಡ್ನ್ಯಾಪ್ ಟೀಮ್ ಶೆಡ್ ಹೊರಗಡೆಯಲ್ಲೇ ನಿಂತಿತ್ತಂತೆ. ದರ್ಶನ್ ಶೆಡ್ ಬಂದ ಕೂಡಲೇ ರೇಣುಕಾ ಸ್ವಾಮಿಯನ್ನು ರಾಘವೇಂದ್ರ ಒಳಗೆ ಕರೆದುಕೊಂಡು ಹೋಗಿದ್ದ.
ಇದನ್ನೂ ಓದಿ: ದರ್ಶನ್ ಗ್ಯಾಂಗ್ನ ಕರಾಳ ಮುಖ ಬಿಚ್ಚಿಟ್ಟ ನಿರ್ಮಾಪಕ ಭರತ್!
ಶೆಡ್ ನಲ್ಲಿ ರೇಣುಕಾ ಸ್ವಾಮಿ ಹತ್ಯೆಯಾದ ಬಳಿಕ ರವಿ, ಜಗ್ಗ, ರಾಜು, ಅನು ಅವರನ್ನ ರಾಘವೇಂದ್ರ ಒಳಗೆ ಕರೆದಿದ್ನಂತೆ. ಹತ್ಯೆ ಮಾಡಿದ ಬಳಿಕ ಪೊಲೀಸರಿಗೆ ಅಪ್ರೂವಲ್ ಆಗುವಂತೆ ಕಿಡ್ನಾಪ್ ಮಾಡಿದ್ದವರನ್ನ ಕೇಳಿದ್ರಂತೆ ದರ್ಶನ್. ಸರೆಂಡರ್ ಆದ್ರೆ ಹಣ ಕೊಡ್ತೀನಿ, ಜಾಮೀನಿನ ಮೇಲೆ ಹೊರಗೆ ಕರೆ ತರ್ತಿನಿ ಎಂದು ರವಿ, ಅನು, ಜಗ್ಗಿ, ರಾಜುಗೆ ಆಫರ್ ಕೊಟ್ಟಿದ್ದರಂತೆ ದರ್ಶನ್.
ಈ ಆಫರ್ ಗೆ ಒಪ್ಪದೇ ಇವರು ತಮ್ಮ ಕಾರ್ ಬಾಡಿಗೆ ಹಣ ಪಡೆದು ವಾಪಸ್ ಮರಳಿದ್ರಂತೆ. ಆದರೆ, ಕೊಲೆ ಕೇಸ್ ಮಾಧ್ಯಮಗಳಲ್ಲಿ ಬರ್ತಿದ್ದ ಹಾಗೇ ಎಸ್ಕೇಪ್ ಆಗಿದ್ದವರು ಬಳಿಕ ಬಂದು ಸರೆಂಡರ್ ಆಗಿದ್ದಾರೆ. ಇಡೀ ಘಟನೆಯ ಬಗ್ಗೆ ಅನು ತನಗೆ ಪರಿಚಿತ ತಬಾರಕ್ ಎಂಬವರ ಜೊತೆ ಮಾತನಾಡಿದ್ದ. ಆ ಬಗ್ಗೆ ತಬಾರಕ್ ಆಡಿಯೋ ಒಂದು ವೈರಲ್ ಆಗ್ತಿದೆ.