Thursday, May 29, 2025

ಬೈಕ್​ ಸವಾರನ ಮೇಲೆ ಉರುಳಿದ ಬೃಹತ್​ ಮರ; BBMP ವಿರುದ್ದ ಎಫ್​ಐಆರ್​ ದಾಖಲು

ಬೆಂಗಳೂರು : ಬೈಕ್​ ಸವಾರನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಗಾಯಗೊಂಡ ಬೈಕ್​ ಸವಾರ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿಗಳ ವಿರುದ್ದ FIR ದಾಖಲಿಸಿದ್ದಾರೆ.

ಇದನ್ನೂ ಓದಿ :ಭೀಕರ ಅಪಘಾತ; ಕಾರ್​ ಪಲ್ಟಿಯಾಗಿ ಸುರಕ್ಷಿತವಾಗಿ ಹೊರ ಬಂದವರ ಮೇಲೆ ಹರಿದ ಲಾರಿ, 6 ಮಂದಿ ಸಾ*ವು

ಜಯನಗರದ ನಾಲ್ಕನೇ ಬ್ಲಾಕ್​ನ ಸ್ವರ್ಣ ಬಿಲ್ಡಿಂಗ್ ಬಳಿ ಘಟನೆ ನಡೆದಿದ್ದು. ಬೈಕ್​ ಸವಾರ ಮೊಹಮ್ಮದ್​ ಜುಹೇಬ್​ ಎಂಬಾತನ ಮೇಲೆ ಬೃಹತ್​ ಗಾತ್ರದ ಮರ ಬಿದ್ದು ಗಾಯಗೊಂಡಿದ್ದು. ಮರ ಬಿದ್ದ ಪರಿಣಾಮ ಮೊಹಮ್ಮದ್​ನ ಕೈ-ಕಾಲು ಮತ್ತು ತಲೆಗೆ ತೀವ್ರವಾಗಿ ಗಾಯವಾಗಿದೆ. ಆದರೆ ಈ ಮೊದಲೇ ಆ ಮರದ ಬುಡ ಹುಳು ತಿಂದು ಕೊಳೆತು ಹೋಗಿದ್ದು, ಅದನ್ನು ತೆರವು ಮಾಡಬೇಕು ಎಂದು ಬಿಬಿಎಂಪಿಗೆ ದೂರು ನೀಡಲಾಗಿತ್ತು. ಆದರೆ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಮರವನ್ನು ತೆರವುಗೊಳಿಸದೆ ನಿರ್ಲಕ್ಷ ತೋರಿತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ :AMCA Project ; ಐದನೇ ತಲೆಮಾರಿನ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್​ ಸಿಂಗ್ ಅನುಮೋದನೆ

ಮರಬಿದ್ದು ಗಾಯಗೊಂಡಿರುವ ಮೊಹಮ್ಮದ್​ ಜುಹೇಬ್​ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರು ದಾಖಲಿಸಿಕೊಂಡಿರುವ ಪೊಲೀಸರು ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ಎಫ್​ಐಆರ್​ ದಾಖಲಿಸಿದ್ದಾರೆ. ಎಫ್​ಐಆರ್​ ಪ್ರಕಾರ ಬಿಬಿಎಂಪಿಯನ್ನು ಎ1 ಆರೋಪಿ ಮಾಡಲಾಗಿದ್ದು. ಅರಣ್ಯ ಇಲಾಖೆ ಎ2 ಆರೋಪಿಯಾಗಿದೆ.

ಇನ್ನು ಗಾಯಾಳು ಮಹಮ್ಮದ್​ಗೆ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಪೊಲೀಸರು ಆಸ್ಪತ್ರೆಗೆ ಹೋಗಿ ಯುವಕನ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES