Wednesday, May 28, 2025

BJP ಶಾಸಕರ ಅಮಾನತು ವಾಪಸ್​: ಸ್ಪೀಕರ್​ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಟೀಕೆ

ಶಿವಮೊಗ್ಗ: ಸದನದ ಕಾರ್ಯಕಲಾಪಗಳಿಗೆ ಅಡ್ಡಿಮಾಡಿದ ಬಿಜೆಪಿ ಸದಸ್ಯರ ಅಮಾನತ್ತನ್ನು ವಾಪಸ್ಸು ತೆಗೆದುಕೊಂಡಿರುವ ನಿರ್ಧಾರ ಸದನದ ಪಾವಿತ್ರ್ಯತೆಯನ್ನು ನಾಶಗೊಳಿಸಿದ್ದು, ಇದು ಸಂವಿಧಾನ ವಿರೋಧಿಯಾಗಿರುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ. ಇದನ್ನೂ ಓದಿ:ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ; ಪತ್ನಿ ಶೀಲ ಶಂಕಿಸಿ ಗಂಡನೇ ಹತ್ಯೆ ಮಾಡಿರುವ ಆರೋಪ

ಬಿಜೆಪಿ ಶಾಸಕರ ಅಮಾನತ್ತು ವಾಪಾಸ್ಸು ನಿರ್ಧಾರ ಸರಿಯಲ್ಲ. ಇದು ಸಾಂವಿಧಾನಿಕವಾಗಿ ವಿರೋಧವಾಗಿದೆ. ವಿರೋಧಪಕ್ಷದ ವಿಪಕ್ಷನಾಯಕ ಸೇರಿದಂತೆ ಸಭಾಧ್ಯಕ್ಷರ ನಡುವೆಯೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು, ಕಾನೂನು ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಸ್ವತಃ ವಿಧಾನಸಭಾ ಅಧ್ಯಕ್ಷರಿಗೇ ಇಲ್ಲ, ಸದನವೇ ಸರ್ವೋಚ್ಛವಾಗಿದೆ. ಇವರುಗಳೆಲ್ಲಾ ಇದರ ಒಂದು ಭಾಗ ಮಾತ್ರ. ಈ ಅಮಾನತು ವಾಪಾಸು ಪಡೆಯುವ ನಿರ್ಧಾರ ಸದನಕ್ಕೆ ಮಾಡಿದ ಅವಮಾನವಿದು ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅಯನೂರು ಮಂಜುನಾಥ್​ ‘ಬಿಜೆಪಿ ಸದಸ್ಯರ ಅಮಾನತ್ತನ್ನು ನಿಯಮ 348ರ ಪ್ರಕಾರ ತೆಗೆದುಕೊಳ್ಳಲಾಗಿದೆ. ಆದರೆ ಅಮಾನತ್ತು ವಾಪಾಸ್ಸು ಪಡೆದಿರುವುದನ್ನು ಯಾವ ನಿಯಮದಡಿ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸದನದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸದನದ ಹೊರಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಇದನ್ನೂ ಓದಿ :‘ಪರಿಹಾರ ಕೊಡ್ತಾರಂತೆ.., ನಾನೇ 10 ಲಕ್ಷ ಕೊಡ್ತೀನಿ ನನ್ನ ಮಗಳನ್ನ ತಂದುಕೊಡಿ’: ಬಾಲಕಿ ತಂದೆ ಆಕ್ರೋಶ

ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಮುಂದೆ ಇಂತಹ ತೀರ್ಮಾನಗಳನ್ನು ತೆಗೆದುಕೊಂಡಾಗ, ಈ ತಪ್ಪು ನಿರ್ಧಾರವನ್ನೇ ಉಲ್ಲೇಖಿಸಬೇಕಾಗುತ್ತದೆ. ಹಾಗಾಗಿ ಇದು ಸಂವಿಧಾನ ವಿರೋಧಿಯಾಗಿದೆ. ವಿರೋಧಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ.

ಹಾಗಾಗಿ ಇದು ಸದನದ ಇತಿಹಾಸದಲ್ಲಿಯೇ ಒಂದು ಕಪ್ಪುಚುಕ್ಕಿಯಾಗಿ ಕಾಣಿಸಿಕೊಳ್ಳಲಿದೆ. ದೇಶದ ಯಾವುದೇ ವಿಧಾನ ಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿಯೂ ಕೂಡ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ವಾಪಸ್ಸು ತೆಗೆದುಕೊಂಡಿರುವ ನಿರ್ಧಾರವನ್ನು ಜಾರಿಗೊಳಿಸಬಾರದು ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES