Saturday, May 24, 2025

ಅಂಬೇಡ್ಕರ್​ ಸತ್ತಾಗ 3 ಅಡಿ ಜಾಗ ಕೊಡಲಿಲ್ಲ, ಈಗ ಅಂಬೇಡ್ಕರ್​ ಹುಲಿಗಳು ಅಂತ ಹೇಳ್ತಾರೆ: ಆರ್.ಅಶೋಕ್​

ಕಲಬುರಗಿ: ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿಯವರನ್ನು 5 ಗಂಟೆಗಳ ಕಾಲ ದಿಗ್ಬಂದನ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್​.ಅಶೋಕ್​ “ಅಂಬೇಡ್ಕರ್​ ಬರೆದ ಸಂವಿದಾನ ಇಡ್ಕೊಂಡು ಓಡಾಡೋ ಕಾಂಗ್ರೆಸಿಗರು, ಗೂಂಡಾಗಿರಿ ನಡೆಸ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅಶೋಕ್​ “ಕಾಂಗ್ರೆಸಿಗರು ದಿನಾ ಅಂಬೇಡ್ಕರ್ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡ್ತಿರಲ್ಲ, ಯಾವ ಪೇಜ್​ನಲ್ಲಿ ಗೂಂಡಾಗಿರಿ ಮಾಡಿ ಅಂತಾ ಬರೆದಿದ್ದಾರ ತೋರಿಸಿ. ನೀವು ಪೊಲೀಸ್ ಠಾಣೆಗೆ ಹೋಗಬಹುದಿತ್ತು. ಆದರೆ ನೀವು ಗೂಂಡಾಗಿರಿ ನಡೆಸಿದ್ದೀರಾ. ನಿಮಗೆ ಧಮ್​ ಇದ್ರೆ ಈಗ ಬನ್ನಿ. ನಾವೆಲ್ಲರೂ ಬಂದಿದ್ದೇವೆ, ನಮ್ಮನ್ನು ಕೂಡಿ ಹಾಕಿ ನೋಡೋಣ. ಇದನ್ನೂ ಓದಿ:ಮರದಡಿ ಮಲಗಿದ್ದ ವ್ಯಕ್ತಿ ಮೇಲೆ ಚರಂಡಿ ತ್ಯಾಜ ಸುರಿದ ಪುರಸಭೆ ನೌಕರರು: ಜೀವಂತ ಸಮಾಧಿಯಾದ ಯುವಕ

ಈ ಕಾಂಗ್ರೆಸ್​ ಸರ್ಕಾರ ಇನ್ನೂ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಈ ಸರ್ಕಾರ ಯಾವಾಗ ಬೇಕಾದರು ಬಿದ್ದು ಹೋಗುತ್ತದೆ. ಪುಟಗೋಸಿ 3 ರಾಜ್ಯದಲ್ಲಿದ್ದುಕೊಂಡು ನಮಗೆ ಚಾಲೆಂಜ್​ ಹಾಕುತ್ತಿದ್ದೀರಾ. ನಾವು ಅಂಬೇಡ್ಕರ್​ ಹುಲಿಗಳು ಅಂತ ಹೇಳ್ಕೋತೀರಾ, ಆದರೆ ಅಂಬೇಡ್ಕರ್​ ಅವರು ಸತ್ತಾಗ ಮೂರಡಿ ಜಾಗ ಕೊಡದ ಇಲಿಗಳು ನೀವು. ನಕಲಿ ಗಾಂಧಿಗಳ ಕಾಲು ನೆಕ್ಕೋದಕ್ಕೆ ಹೋಗಿದೀರಾ ಹೇಗೆ ಎಂದು ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಆರ್​.ಅಶೋಕ್​ ” ಇವತ್ತು ಡಿಕೆಶಿ ಎರಡೂವರೆ ಕೋಟಿ ನ್ಯಾಷನಲ್ ಹೆರಾಲ್ಡ್ ಗೆ ದೇಣಿಗೆ ಕೊಟ್ಟಿದ್ದೇವೆ ಅಂತಾ ಹೇಳ್ತಾರೆ. ಆದರೆ ಅಂಬೇಡ್ಕರ್ ಅವರಿಗೆ ಕೇವಲ ಐದು ಸಾವಿರ ದುಡ್ಡು ಕೊಡೊಕೆ‌ ಯೋಗ್ಯತೆ ಇಲ್ಲದವರು ನೀವು. ನಿಮಗೆ ಅಂಬೇಡ್ಕರ್​ ಶವ ಬೇಕಿರಲಿಲ್ಲ, ಅವರ ಪುಸ್ತಕ ಬೇಕಾಗಿತ್ತು. ಕಾಂಗ್ರೆಸ್​ ಸರ್ಕಾರ, ರಾಜ್ಯದ ಪೊಲೀಸ್ ಠಾಣೆಗಳನ್ನು, ಕಾಂಗ್ರೆಸ್​ ಠಾಣೆಯಾಗಿ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ:ಮಾನಹಾನಿ ಪ್ರಕರಣ: ರಾಹುಲ್​ ಗಾಂಧಿ ವಿರುದ್ದ ಜಾಮೀನು ರಹಿತ ವಾರೆಂಟ್​ ಜಾರಿ

ಬಿಜೆಪಿ ನಂ 1 ಪಾರ್ಟಿ, ನಮ್ಮ ಪಾರ್ಟಿಯನ್ನ ಎದುರಿಸೋ ತಾಕತ್ತು ನಿಮಗೆ ಇಲ್ಲ. ಖರ್ಗೆ ಅವರು ಆಪರೇಷನ್​ ಸಿಂಧೂರ್​ನ ಚುಟುಪುಟು ಯುದ್ದ ಅಂತ ಹೇಳ್ತಾರೆ. ಅದೇ ಮುಂಬೈ ದಾಳಿ ಆದಾಗ ನಾಲ್ಕು ಫ್ಲೈಟ್ ಆರಿಸಿ ಚುಟುಪುಟು ಯುದ್ದ ಮಾಡ್ಬೇಕಿತ್ತು. ಕಾಂಗ್ರೆಸ್​ ಇತಿಹಾಸ ಬಹಳ ದೊಡ್ಡದಿದೆ. ನಮ್ಮನ್ನು ಕೆಣಕೋಕೆ ಬರಬೇಡಿ. ಕಾಂಗ್ರೆಸ್​ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಬಂದಿದೆ. ನಿಮ್ಮ ಆಟ ಬಹಳ ದಿನ ನಡೆಯಲ್ಲ. ಪ್ರಿಯಾಂಕ್​ ಖರ್ಗೆ ರಾಜಿನಾಮೇ ಕೊಡೊವರೆಗೂ ಈ ಹೋರಾಟ ಮುಂದುವರಿಯುತ್ತೆ ಎಂದು ಆರ್​. ಅಶೋಕ್​ ಹೇಳಿದರು.

RELATED ARTICLES

Related Articles

TRENDING ARTICLES