ಬಾಗಲಕೋಟೆ: ಕೆಲಸ ವೇಳೆ ಕಾರ್ಮಿಕನೊಬ್ಬನ ಕಾಲಿಗೆ ಹಾವು ಕಚ್ಚಿದ್ದು. ಹಾವಿನಿಂದ ಕಡಿತಕೊಳಗಾದ ಯುವಕ ಸ್ವಲ್ಪವೂ ವಿಚಲಿತನಾಗದೆ, ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಈ ರೀತಿ ಆಸ್ಪತ್ರೆಗೆ ಬಂದ ಯುವಕನನ್ನು ಧೀರಜ್ ಎಂದು ಗುರುತಿಸಲಾಗಿದೆ.
ಬಾಗಲಕೋಟೆಯ, ನವನಗರದ ಸೆಕ್ಟರ್ ನಂಬರ್ 13ರಲ್ಲಿ ಸೆಂಟ್ರಿಂಗ್ ಕಾರ್ಮಿಕ ಧೀರಜ್ ಗೆ ಕೆಲಸದ ವೇಳೆಯಲ್ಲಿ ಕಾಲಿಗೆ ನಾಗರ ಹಾವು ಕಚ್ಚಿದೆ. ಕಚ್ಚಿದ ಹಾವನ್ನ ಹಿಡಿದು ಡಬ್ಬಿಯಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ಧೀರಜ್, ತನ್ನ ಜೊತೆಗೆ ಹಾವನ್ನು ಹಿಡಿದು ತಂದಿದ್ದಾನೆ. ಇದನ್ನ ಕಂಡ ವೈದ್ಯರು ಧೀರಜ್ಗೆ ತುರ್ತು ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ :ಗ್ಯಾಂಗ್ರೇಪ್ ಪ್ರಕರಣ: ಜೈಲಿನಿಂದ ಹೊರಬಂದು ರೋಡ್ ಶೋ ನಡೆಸಿದ್ದ ಆರೋಪಿಗಳು ಮರಳಿ ಜೈಲಿಗೆ
ಇನ್ನು ಮೂಲತಃ ಬಿಹಾರ ರಾಜ್ಯದವನಾದ ಧೀರಜ್ ನವನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡ್ತಿದ್ದಾನೆ. ಕಚ್ಚಿದ ಹಾವನ್ನು ಹುಡುಕಿ, ಡಬ್ಬಿಗೆ ಹಾಕಿಕೊಂಡು ಜಿಲ್ಲಾಸ್ಪತ್ರೆಗೆ ಬಂದು ವೈದ್ಯರಿಗೆ ಕಚ್ಚಿದ ಹಾವನ್ನು ತೋರಿಸಿದ ಧೀರಜ್ ಕಾರ್ಯ ವೈದ್ಯರಿಗೆ ಅಚ್ಚರಿ ಮೂಡಿಸಿದ್ದು. ಇದರಿಂದಾಗಿ ಧೀರಜ್ಗೆ ಚಿಕಿತ್ಸೆ ನೀಡಲು ಸಹಕಾರಿಯಾಯಿತು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಯುವಕ ಧೀರಜ್ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ :ವೃದ್ದನ ಹೊಟ್ಟೆಯಲ್ಲಿತ್ತು 8000 ಕಲ್ಲುಗಳು: 1 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು