Wednesday, May 21, 2025

ಆಕೆ ಕೊಲೆ ಮಾಡಿದ್ದಾಳಾ?’: ನಕಲಿ IAS ಅಧಿಕಾರಿ ಪೂಜಾ ಖೇಡ್ಕರ್​ಗೆ​ ಸುಪ್ರೀಂ ಜಾಮೀನು

ದೆಹಲಿ: ದೈಹಿಕ ಅಂಗವೈಕಲ್ಯದ ಬಗ್ಗೆ ಸುಳ್ಳು ಹೇಳಿ, ಉಪನಾಮ ಬದಲಾಯಿಸಿಕೊಂಡು, ಹಿಂದುಳಿದ ವರ್ಗಗಳ ನಕಲಿ ಪ್ರಮಾಣಪತ್ರ ನೀಡಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮಾಜಿ ಪ್ರೋಬೆಷನಲ್​ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ಗೆ ಸುಪ್ರೀಂ ಕೋರ್ಟ್​ ನಿರೀಕ್ಷಣ ಜಾಮೀನು ನೀಡಿದೆ.

ಪೂಜಾ ಖೇಡ್ಕರ್​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 35,000 ರೂ. ನಗದು ಭದ್ರತೆಯ ಮೇಲೆ ಅವರನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ. ಜೊತೆಗೆ ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿದರ ಕುರಿತು ಸುಪ್ರೀಂ ಕೋರ್ಟ್​ ಪ್ರಶ್ನಿಸಿದೆ. ಇದನ್ನೂ ಓದಿ :ಪತಿಯ ಅಕ್ರಮ ಸಂಬಂಧ: ಡಿವೋರ್ಸ್ ಕೊಡುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ

ಶ್ರೀಮತಿ ಪೂಜಾ ಖೇಡ್ಕರ್​ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬ ತನಿಖಾಧಿಕಾರಿಗಳ ಹೇಳಿಕೆಯನ್ನ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್​ “ಸಹಕರಿಸುವುದು ಎಂದರೆ ಆಕೆಯೇನು ಕೊಲೆ ಮಾಡಿಲ್ಲ, ಅಥವಾ NDPS(ಮಾದಕ ವಸ್ತು ವಿರೋಧಿ ಕಾಯ್ದೆ) ಕಾಯ್ದೆಯ ಅಪರಾಧವಲ್ಲ, ಅವರು ತನಿಖೆಗೆ ಸಹಕರಿಸುತ್ತಾರೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ.

ಇದಕ್ಕೆ ದೆಹಲಿ ಪೊಲೀಸರ ಪರವಾಗಿ ವಾದ ಮಂಡಿಸಿದ ವಕೀಲ ಎಸ್.ವಿ ರಾಜು ವಿರೋಧ ವ್ಯಕ್ತಪಡಿಸಿದ್ದು. ಶ್ರೀಮತಿ ಪೂಜಾ ಖೇಡ್ಕರ್​ “ಪಿತೂರಿಯ ವಿವರಗಳನ್ನ ಬಿಡುಗಡೆ ಮಾಡಿಲ್ಲ, ಇದು ಒಂದು ದೊಡ್ಡ ಹಗರಣವಾಗಿದೆ. ಪೂಜಾಗೆ ನಕಲಿ ಪ್ರಮಾಣ ಪತ್ರ ನೀಡಿದವರ ಬಗ್ಗೆ ತನಿಖೆ ನಡೆಸಬೇಕಿದೆ. ಆದ್ದರಿಂದ ಆಕೆಯನ್ನು ಪೊಲೀಸ್ ಕಸ್ಟಡಿಗೆ ನೀಡುವ ಅಗತ್ಯವಿದೆ ಎಂದು ವಾದಿಸಿದರು. ಇದನ್ನೂ ಓದಿ :SSLC ಪರೀಕ್ಷೆಯಲ್ಲಿ ಫೇಲ್: ಶಾಲೆ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಬಾಲಕ ಆತ್ಮಹ*ತ್ಯೆ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ “ಶ್ರೀಮತಿ ಖೇಡ್ಕರ್ ಅವರು ನಕಲಿ ಪ್ರಮಾಣಪತ್ರಗಳನ್ನು ಪಡೆದ ಮೂಲವನ್ನು ಬಹಿರಂಗಪಡಿಸುವ ಅಗತ್ಯವಿದ್ದರೂ, ಅವರನ್ನು ಕಸ್ಟಡಿಯಲ್ಲಿ ಇಡಬೇಕಾಗಿಲ್ಲ” ಎಂದು ನ್ಯಾಯಾಲಯ ಉತ್ತರಿಸಿದೆ.

 

RELATED ARTICLES

Related Articles

TRENDING ARTICLES