Wednesday, May 21, 2025

ರಾಜಸ್ಥಾನ ತಂಡಕ್ಕೆ ಸೇರಿಸೋದಾಗಿ ವಂಚನೆ: ಮಗನ ಭವಿಷ್ಯಕ್ಕಾಗಿ 24 ಲಕ್ಷ ಕೊಟ್ಟು ಮೋಸ ಹೋದ ತಂದೆ

ಬೆಳಗಾವಿ : ರಾಜಸ್ಥಾನ ರಾಯಲ್ಸ್‌ ಐಪಿಎಲ್ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ಸೈಬರ್‌ ವಂಚಕರು 24 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು. ಮೋಸ ಹೋದ ಯುವಕನನ್ನು 19 ವರ್ಷದ ರಾಕೇಶ್​ ಯಡೂರು ಎಂದು ಗುರುತಿಸಲಾಗಿದೆ.

ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದ ಚಿಕ್ಕೋಡಿ ತಾಲೂಕಿನ ಚಿಂಚಲಿ ಗ್ರಾಮದ ಯುವಕ ರಾಕೇಶ ಯಡೂರ್​ನನ್ನು ಸೈಬರ್​ ವಂಚಕರು ಇನ್ಸ್ಟಾಗ್ರಾಮ್​ನಲ್ಲಿ ಸಂಪರ್ಕಿಸಿ ವಂಚಿಸಿದ್ದಾರೆ. 2024 ಮೇ ತಿಂಗಳಲ್ಲಿ ಹೈದ್ರಾಬಾದ್‌‌ನಲ್ಲಿ ನಡೆದ ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್ ಟೂರ್ನಿಯ ಆಯ್ಕೆಯ ಟ್ರೈಯಲ್‌‌ನಲ್ಲಿ ಭಾಗಿಯಾಗಿದ್ದ ರಾಕೇಶ್​ ಉತ್ತಮವಾಗಿ ಪ್ರದರ್ಶನ ನೀಡಿದ್ದ. ಇದನ್ನೂ ಓದಿ :ಕನ್ನಡ ಮಾತನಾಡಲ್ಲ ಎಂದು SBI ಬ್ಯಾಂಕ್​ ಸಿಬ್ಬಂದಿ ಧಿಮಾಕು: ಟ್ವಿಟ್​ ಮಾಡಿ ಸಿಎಂ ಆಕ್ರೋಶ

ಆಲ್‌ರೌಂಡರ್ ಆಟದ ಮೂಲಕ ಆಯೋಜಕರ ಗಮನ ಸೆಳೆದಿದ್ದ ರಾಕೇಶ್​ಗೆ ಅನಾಮಧೇಯ ಇನ್ಸ್ಟಾ ಖಾತೆಯಿಂದ “ನಿಮ್ಮ ಕ್ರಿಕೆಟ್ ಪ್ರದರ್ಶನ ಚನ್ನಾಗಿದೆ, ರಾಜಸ್ಥಾನ ರಾಯಲ್ಸ್‌ಗೆ ಸೆಲೆಕ್ಟ್ ಮಾಡಿಸ್ತಿವಿ ಎಂದು ವಂಚಕರು ನಂಬಿಸಿದ್ದಾರೆ. 2024 ನವೆಂಬರ್‌‌ನಿಂದ 2025 ಏಪ್ರಿಲ್ 2025ರವರೆಗೆ ಹಂತ ಹಂತವಾಗಿ 24 ಲಕ್ಷ ಹಣ ಪಡೆದಿದ್ದಾರೆ.

ಇದನ್ನೂ ಓದಿ :ಕನ್ನಡದ ಸಾಹಿತಿ ಬಾನು ಮುಷ್ತಾಕ್​ ಅವರ ಕೃತಿಗೆ ಪ್ರತಿಷ್ಠಿತ ‘ಬೂಕರ್’​ ಪ್ರಶಸ್ತಿ

ಮಗನ ಭವಿಷ್ಯ ಉಜ್ವಲ ಆಗುತ್ತೆಂದು ಸಾಲಸೂಲ ಮಾಡಿ ರಾಕೇಶ್​ ಪೋಷಕರು ವಂಚಕರಿಗೆ ಹಣ ನೀಡಿದ್ದಾರೆ. ಬ್ಯಾಂಕ್ ಅಕೌಂಟ್, ಗೂಗಲ್ ಪೇ, ಫೋನ್ ಪೇ ಮೂಲಕ ವಂಚಕರು ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರ ಮೋಸ ಹೋಗಿರುವುದನ್ನು ಅರಿತ ರಾಕೇಶ್​ ಬೆಳಗಾವಿ ಜಿಲ್ಲಾ ಸಿಇಎನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತ ಹಣ ಕಳೆದುಕೊಂಡು ರಾಕೇಶ್​ ಕುಟುಂಬ ಕಂಗಾಲಾಗಿದೆ. ಇನ್ನು ಈ ಕುರಿತು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು. ‘ಅನಾಮಧೇಯ ವ್ಯಕ್ತಿಗಳು ಈ ರೀತಿಯ ಆಫರ್​ ನೀಡಿದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES