Wednesday, May 21, 2025

ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ ನಾಲ್ವರು ಸೇರಿದಂತೆ 6 ಮಂದಿ ಸಾ*ವು

ವಿಜಯಪುರ: ಲಾರಿ, ಬಸ್ ಮತ್ತು ಬೊಲೆರೋ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾಗಿವೆ.

ವಿಜಯಪುರ ಜಿಲ್ಲೆಯ, ಮನಗೂಳಿ ಪಟ್ಟಣದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು. ಸೊಲ್ಲಾಪುರ ಕಡೆಗೆ ಹೊರಟಿದ್ದ ಬೊಲೆರೋ ವಾಹನ, ಬಳ್ಳಾರಿ ಕಡೆ ಬರುತ್ತಿದ್ದ ವಿಆರ್​ಎಲ್​ ಬಸ್​ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಮತ್ತು ವಿಆರ್​ಎಸ್​ ಬಸ್​ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ :ರಾಹುಲ್​ ಆಧುನಿಕ ಯುಗದ ಮೀರ್​ ಜಾಫರ್​: ಸೇನೆ ಬಗ್ಗೆ ಪ್ರಶ್ನೆ ಎತ್ತಿದ ರಾಹುಲ್​ ವಿರುದ್ದ ಬಿಜೆಪಿ ವಾಗ್ದಾಳಿ

ಸಾವನ್ನಪ್ಪಿದವರನ್ನು ಟಿ.ಭಾಸ್ಕರನ್ ಮಲಕಂಠನ್ (ಕೆನರಾ ಬ್ಯಾಂಕ್ ಮ್ಯಾನೇಜರ್), ಪವಿತ್ರಾ (ಭಾಸ್ಕರನ್ ಹೆಂಡತಿ), ಅಭಿರಾಮ (ಮಗ), ಜೋಸ್ನಾ (ಮಗಳು), ವಿಕಾಸ ಸಿದ್ದಪ್ಪ ಮಕನಿ (ಬಸ್​ ಚಾಲಕ) ಗುರುತಿಸಿದ್ದು. ಪವಾಡ ಸದೃಷ್ಯ ರೀತಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಮಗು ಪ್ರವೀಣ್​ ತೇಜ್​ ಪ್ರಾಣಾಪಾಯದಿಂದ ಪಾರಾಗಿದೆ. ಘಟನಾ ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES