ಬಳ್ಳಾರಿ : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಾಧನ ಸಮಾವೇಶದಲ್ಲಿ ಮತ್ತೊಮ್ಮೆ ಪಹಲ್ಗಾಮ್ ದಾಳಿಗೆ ಮೋದಿ ಕಾರಣ ಎಂದು ಹೇಳಿದ್ದು. ಪಹಲ್ಗಾಮ್ ದಾಳಿಕೆ ಕೇಂದ್ರ ಸರ್ಕಾರದ ವೈಪಲ್ಯವೇ ಕಾರಣ ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದ ಹಿನ್ನಲೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು. ಈ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ ‘ಪಹಲ್ಗಾಂ ದಾಳಿ ಬಗ್ಗೆ ಮಾತನಾಡಿದ ಖರ್ಗೆ, ಪಹಲ್ಗಾಮ್ನಲ್ಲಿ 26 ಜನರ ಹತ್ಯೆಯಾಯಿತು. ಇದಕ್ಕೆ ಕಾರಣ ಮೋದಿ ಸರ್ಕಾರ ಅಲ್ಲಿ ಭದ್ರತೆ ನೀಡದಿರುವುದೆ ಕಾರಣ. ಮೋದಿ ಅವರು ಏಪ್ರೀಲ್ 17ರಂದು ಕಾಶ್ಮೀರಕ್ಕೆ ಹೋಗುವವರಿದ್ದರು. ಅದಕ್ಕೆ ಅವರು ತಮ್ಮ ಪ್ರವಾಸ ರದ್ದುಗೊಳಿಸಿದರು. ಈಗಿದ್ದಾಗ ಮೋದಿ ಯಾಕೆ ಅಲ್ಲಿದ್ದ ಪ್ರವಾಸಿಗರ ಸುರಕ್ಷತೆ ಬಗ್ಗೆ ಮಾಹಿತಿ ಕೊಡಲಿಲ್ಲ. ಒಂದು ವೇಳೆ ಮೋದಿ ಮಾಹಿತಿ ನೀಡಿದ್ದರೆ 26 ಜನರು ಬದುಕುಳಿಯುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ :15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅಪ್ರಾಪ್ತರ ಬಂಧನ
ಪಾಕಿಸ್ತಾನದ ಬಗ್ಗೆ ಮಾತನಾಡಿದ ಖರ್ಗೆ “ಪಾಕಿಸ್ತಾನಕ್ಕೆ ನಮ್ಮ ದಾಳಿ ಮಾಡೋ ಶಕ್ತಿ ಇಲ್ಲ, ಆದರೆ ಅವರು ಚೀನಾ ಸಹಾಯ ಪಡೆದು ನಮ್ಮ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ದೇಶದ ಜೊತೆ ನಾವು ನಿಂತುಕೊಂಡೆವೂ. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಈಗಿದ್ದಾಗ ಬಿಜೆಪಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಕಾಂಗ್ರೆಸ್ನವರ ಮೇಲೆ ಬಿಜೆಪಿಯವರು ಸ್ವತಂತ್ರ್ಯ ಸಂಸ್ಥೆಗಳಾದ ಈಡಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ನಡೆಸುತ್ತಿದೆ. ಬಿಜೆಪಿಯವರು ದೇಶದಲ್ಲಿ ದುರಾಡಳಿತ ನಡೆಸುತ್ತಿದೆ. ಇದ್ಯಾವುದಕ್ಕೂ ಕಾಂಗ್ರೆಸ್ ಹೆದರುವುದಿಲ್ಲ. ನಮ್ಮ ಪಕ್ಷದ ನಾಯಕರು ಸರ್ವಪಕ್ಷ ನಿಯೋಗದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ. ದೇಶ ಅಂದರೆ ಸರ್ವರು ಇರಬೇಕು, ಒಂದು ಪಕ್ಷ ಜನರ ಭಾವನೆಗಳ ಜೊತೆ ಆಟವಾಡಬಾರದು ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ:ಜನ ಸಾಯ್ತಿದ್ದಾರೆ, ಕಾಂಗ್ರೆಸ್ ಅವರು ಪಂಚೆ ಎತ್ಕೊಂಡು ಸಮಾವೇಶಕ್ಕೆ ಹೋಗಿದ್ದಾರೆ: ಆರ್.ಅಶೋಕ್
ಮುಂದುವರಿದು ಮಾತನಾಡಿದ ಖರ್ಗೆ ” ನಾವೆಲ್ಲಾ ಇಲ್ಲಿ ದೇಶದ ಬಗ್ಗೆ ಮಾತನಾಡುತ್ತಿದ್ದರೆ, ಮೋದಿ ಮಾತ್ರ ಚುನಾವಣ ರ್ಯಾಲಿಯಲ್ಲಿ ಬ್ಯುಸಿಯಾಗಿದ್ದರು. ಎರಡು ಸರ್ವಪಕ್ಷ ಸಭೆ ಕರೆದು ಅವರು ಸಭೆಗೆ ಬರಲಿಲ್ಲ. ದೇಶದ ಮೇಲೆ ಅಷ್ಟೋಂದು ಪ್ರೀತಿ ಇದ್ದರೆ ಯಾಕೆ ನೀವು ಈ ಸಭೆಗೆ ಬರಲಿಲ್ಲ. ಒಂದು ವೇಳೆ ನಾವು ಆ ಸಭೆಗೆ ಹೋಗಿಲ್ಲ ಅಂದಿದ್ದರೆ ನಮ್ಮನ್ನು ದೇಶದ್ರೋಹಿಗಳು ಅಂತ ಕರೆಯುತ್ತಿದ್ದರು. ನೀವು ಹೀಗೆ ಮಾಡ್ತಾ ಹೋದರೆ ಮುಂದಿನ ದಿನಗಳಲ್ಲಿ ದೇಶದ್ಯಂತ ದಂಗೆ ಏಳಬೇಕಾಗುತ್ತದೆ ಎಂದು ಹೇಳಿದರು.