Saturday, May 17, 2025

ತಿರುಪತಿಗೆ ಭೇಟಿ ಕೊಟ್ಟ ಇಸ್ರೋ ಅಧ್ಯಕ್ಷ ವಿ. ನಾರಾಯಣ

ತಿರುಪತಿ: ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು. ದೂರ ಸಂವೇದಿ ಉಪಗ್ರಹ ಕಾರ್ಯಾಚರಣೆಯಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ-ಸಿ61/ಇಒಎಸ್-09) ಮಿಷನ್‌ನ ಯಶಸ್ವಿ ಉಡಾವಣೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮೇ 18 ರಂದು ಬೆಳಿಗ್ಗೆ 5.59 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ದೂರ ಸಂವೇದಿ ಉಪಗ್ರಹ ಉಡಾವಣೆ ಸಮಯ ನಿಗದಿಯಾಗಿದ್ದು. ಅದಕ್ಕೆ ಮುನ್ನ ಶುಕ್ರವಾರ(ಮೇ.16) ಮುಂಜಾನೆ ವಿಐಪಿ ದರ್ಶನದ ಸಮಯದಲ್ಲಿ, ಶ್ರೀ ನಾರಾಯಣನ್ ಅವರು ಆಚರಣೆಯಲ್ಲಿ ಭಾಗವಹಿಸಿದರು ಮತ್ತು ಪಿಎಸ್‌ಎಲ್‌ವಿ-ಸಿ 61 ರ ಚಿಕಣಿ ಮಾದರಿಯನ್ನು ದೇವರ ಪಾದಗಳ ಬಳಿ ಇರಿಸಿ, ಕಾರ್ಯಾಚರಣೆಯ ಯಶಸ್ಸು ಮತ್ತು ಸುರಕ್ಷತೆಗಾಗಿ ಆಶೀರ್ವಾದವನ್ನು ಕೋರಿದರು. ಇದನ್ನೂ ಓದಿ :‘ದೇಶದ ಯೋಧರು ಮೋದಿ ಕಾಲಿಗೆ ನಮಸ್ಕರಿಸುತ್ತಾರೆ’: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಚಿವ

PSLV-C61 ಉಪಗ್ರಹ ಉಡಾವಣೆ..!

“ಪಿಎಸ್‌ಎಲ್‌ವಿ-ಸಿ61 ರೊಂದಿಗಿನ ಈ 101 ನೇ ಮಿಷನ್ ಇಸ್ರೋಗೆ ಒಂದು ಪ್ರಮುಖ ಮೈಲಿಗಲ್ಲಾಗಲಿದ್ದು, ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ಬಾಹ್ಯಾಕಾಶ ಆಧಾರಿತ ಪರಿಹಾರಗಳಿಗೆ ದೇಶದ ಬದ್ಧತೆಯನ್ನು ಬಲಪಡಿಸುತ್ತದೆ” ಎಂದು ಶ್ರೀ ನಾರಾಯಣನ್ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ :ಪಾಪಿ ಪಾಕಿಸ್ತಾನ ಮತ್ತು ಮಿತ್ರ ರಾಷ್ಟ್ರಗಳಿಗೆ ಹಣ್ಣು ಕಳಿಸೋದಿಲ್ಲ: ರೈತರಿಂದ ದಿಟ್ಟ ನಿರ್ಧಾರ

ಈ ಉಪಗ್ರಹವು ‘ಭೂ ವೀಕ್ಷಣಾ ಉಪಗ್ರಹವನ್ನು ಸೂರ್ಯ-ಸಿಂಕ್ರೊನಸ್ ಧ್ರುವ ಕಕ್ಷೆಯಲ್ಲಿ (SSPO) ಇರಿಸುತ್ತದೆ, ಇದು ಒಂದು ವಿಶಿಷ್ಟ ರೀತಿಯ ಧ್ರುವೀಯ ಕಕ್ಷೆಯಾಗಿದ್ದು, ಅಲ್ಲಿ ಉಪಗ್ರಹವು ಸೂರ್ಯನೊಂದಿಗೆ ಸ್ಥಿರವಾದ ಜೋಡಣೆಯನ್ನು ಕಾಯ್ದುಕೊಳ್ಳುತ್ತದೆ.

RELATED ARTICLES

Related Articles

TRENDING ARTICLES