Tuesday, August 26, 2025
Google search engine
HomeUncategorizedಭಾರತಕ್ಕೆ ಬೇಕಾಗಿದ್ದ ಐವರು ಕುಖ್ಯಾತ ಉಗ್ರರ ಸಾವು: ಉಗ್ರರ ಮಾಹಿತಿ ಬಹಿರಂಗ

ಭಾರತಕ್ಕೆ ಬೇಕಾಗಿದ್ದ ಐವರು ಕುಖ್ಯಾತ ಉಗ್ರರ ಸಾವು: ಉಗ್ರರ ಮಾಹಿತಿ ಬಹಿರಂಗ

ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ “ಆಪರೇಷನ್​ ಸಿಂಧೂರ್​” ಹೆಸರಿನಲ್ಲಿ ಮೇ.7ರಂದು ಕಾರ್ಯಚರಣೆ ನಡೆಸಿದ್ದು. ಈ ಕಾರ್ಯಚರಣೆಯಲ್ಲಿ ಭಾರತಕ್ಕೆ ಬೇಕಾಗಿದ್ದ 5 ಮೋಸ್ಟ್​ ವಾಂಟೆಡ್​ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ.

ಮೇ.7 ರಂದು ಭಾರತೀಯ ಸೇನೆ ಮಿಸೈಲ್​ ಮತ್ತು ಕ್ಷಿಪಣಿಗಳನ್ನ ಬಳಸಿಕೊಂಡು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರತಾಣಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಇವರಲ್ಲಿ ಮೋಸ್ಟ್​ ವಾಂಟೆಡ್​ ಉಗ್ರ ಮಸೂದ್​ ಅಜರ್​ನ 10 ಜನ ಕುಟುಂಬಸ್ಥರು ಸಾವನ್ನಪ್ಪಿದ್ದರು. ಮಸೂದ್​ ಅಜರ್ ತಮ್ಮ ಆಬ್ದುಲ್​ ರೌಫ್​ ಕೂಡ ಸಾವನ್ನಪ್ಪಿದ್ದನು.

ಇದನ್ನೂ ಓದಿ :ಸ್ವಯಂ ಸೇವಕರಾಗಲು ಯುವಕರ ಉತ್ಸಾಹ: ಪ್ರಾಣವನ್ನೇ ನೀಡಲು ಸಿದ್ದವೆಂದ ಯುವಪಡೆ

ಇದರ ನಡುವೆ ಆಪರೇಷನ್​ ಸಿಂಧೂರ್​ ಕಾರ್ಯಚರಣೆಯಲ್ಲಿ ಭಾರತಕ್ಕೆ ಬೇಕಾಗಿದ್ದ ಪ್ರಮುಖ 5 ಉಗ್ರರು ಸಾವನ್ನಪ್ಪಿದ್ದಾರೆ. ಇನ್ನು ಸಾವನ್ನಪ್ಪಿದ ಉಗ್ರರ ಯಾರು ಎಂಬ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಉಗ್ರ ನಂ.1: ಮುದಾಸರ್ ಖಾದಿಯಾನ್ ಖಾಸ್ @ ಮುದಾಸರ್ @ ಅಬು ಜುಂದಾಲ

ಮುದಾಸರ್​ ಖಾದಿಯಾನ್​ ಎಂಬಾತ ಭಾರತದ ದಾಳಿಯಲ್ಲಿ ಸಾವನ್ನಪ್ಪಿದ್ದು. ಈತ ಲಷ್ಕರ್​-ಎ-ತೈಬಾದ ಪ್ರಮುಖ ಕಮಾಂಡರ್​ಗಳಲ್ಲಿ ಒಬ್ಬ. ಈತನಿಗೆ ಮುರಿಡ್ಕೆಯ ಮರ್ಕಜ್​ ತೈಬಾದ ಉಸ್ತುವಾರಿ ನೀಡಲಾಗಿದೆ.

ಇತನನ್ನು ಮೇ,7 ರಂದು ಭಾರತ ಕೈಗೊಂಡ ಆಪರೇಷನ್​ ಸಿಂಧೂರ ಕಾರ್ಯಚರಣೆಯಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದ್ದು. ಈತನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮತ್ತು ಪಾಕಿಸ್ತಾನ ಪಂಜಾಬ್​ ಪ್ರಾಂತ್ಯದ ಸಿಎಂ ಮರ್ಯಮ್​ ನವಾಜ್​ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಈತನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಈತನ ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಉಗ್ರ ನಂ 2: ಹಫೀಜ್ ಮುಹಮ್ಮದ್ ಜಮೀಲ್

ಹಫೀಜ್​ ಮುಹಮ್ಮದ್ ಜಮೀಲ್​ ಜೈಶ್​-ಎ-ಮೊಹಮ್ಮದ್​ ಸಂಘಟನೆ ಜೊತೆ ಸಂಬಂಧ ಹೊಂದಿದ್ದು. ಮೌಲಾನ ಮಸೂದ್​ ಅಜರ್​ನ ಹಿರಿಯ ಸೋದರ ಮಾವನಾಗಿದ್ದಾನೆ. ಇನ್ನು ಈತನಿಗೆ ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾ ದರ್ಗಾದ ಉಸ್ತುವಾರಿ ನೀಡಲಾಗಿದ್ದು. ಈತ ಯುವಕರಿಗೆ ಮೂಲಭೂತವಾದದ ಬಗ್ಗೆ ಬೋಧನೆ ಮಾಡುತ್ತಿದ್ದನು ಜೊತೆಗೆ ಉಗ್ರ ಕೃತ್ಯ ನಡೆಸಲು ನಿಧಿ ಸಂಗ್ರಹಣೆಯಲ್ಲಿ ಸಕ್ರಿಯನಾಗಿದ್ದನು.

ಇದನ್ನೂ ಓದಿ :ಯುದ್ಧದ ಮುನ್ಸೂಚನೆ: ರೈಲು, ಬಸ್​ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸೂಚನೆ

ಉಗ್ರ ನಂ. 3 : ಮೊಹಮ್ಮದ್ ಯೂಸುಫ್ ಅಜರ್ @ ಉಸ್ತಾದ್ ಜಿ @ ಮೊಹಮ್ಮದ್ ಸಲೀಮ್ @ ಘೋಸಿ ಸಹಾಬ್

ಇನ್ನು ಈತ ಜೈಶ್​-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್​ ಆಗಿದ್ದು ಮೌಲಾನಾ ಮಸೂದ್ ಅಜರ್ ಸಂಬಂಧಿಯಾಗಿದ್ದಾನೆ. ಉಗ್ರರಿಗೆ ಶಸ್ತ್ರಸ್ತ ತರಬೇತು ನೀಡುತ್ತಿದ್ದ ಈತ ಜಮ್ಮು ಕಾಶ್ಮೀರದ ಅನೇಕ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದನು. ಅಷ್ಟೇ ಅಲ್ಲದೇ ಕಂದಹಾರ ವಿಮಾನ ಹೈಜಾಕ್ ಪ್ರಕರಣದಲ್ಲಿ ಬೇಕಾಗಿರುವ ಅಪರಾಧಿಯಾಗಿದ್ದಾನೆ.

ಉಗ್ರ ನಂ 4. ಅಬು ಆಕಾಶಾ @ ಖಾಲಿದ್

ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಕಮಾಂಡರ್​ ಆಗಿರುವ ಈತ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆ.  ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿರುವ ಈತನ ಅಂತ್ಯಕ್ರಿಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು.

ಇದನ್ನೂ ಓದಿ :ಯುದ್ದದ ಸನ್ನಿವೇಶವಿದೆ; ಧವಸ, ಧಾನ್ಯ ಎಷ್ಟಿದೆ ಎಂಬ ಬಗ್ಗೆ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್​

ಉಗ್ರ ನಂ 5. ಮೊಹಮ್ಮದ್ ಹಸನ್ ಖಾನ್

ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖನಾಗಿರುವ ಈತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಅವರ ಮಗ.ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments