Thursday, May 8, 2025

‘ನನ್ನ ಪತಿ ಸಾವಿಗೆ ಸೇಡು ತೀರಿಸಿಕೊಂಡ ಪ್ರಧಾನಿ ಮೋದಿ ಧನ್ಯವಾದ’: ಶುಭಂ ದ್ವಿವೇದಿ ಪತ್ನಿ

ಹರಿಯಾಣ : ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಭಾರತ ಪ್ರತಿಕಾರ ತೆಗೆದುಕೊಂಡಿದ್ದು. ‘ಆಪರೇಷನ್​ ಸಿಂಧೂರ’ ಹೆಸರಿನಲ್ಲಿ ಕಾರ್ಯಚರಣೆ ನಡೆಸಿದ ಭಾರತೀಯ ಸೇನೆ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಇದಕ್ಕೆ ಶುಭಂ ದ್ವಿವೇಧಿ ಅವರ ಪತ್ನಿ ಅಶಾನ್ಯ ದ್ವಿವೇದಿ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ನೇಪಾಳದ ಓರ್ವ ಪ್ರವಾಸಿಗ ಸೇರಿದಂತೆ 27 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಕೆಲ ತಿಂಗಳ ಹಿಂದೆ ಮದುವೆಯಾಗಿ ಹನಿಮೂನ್​ಗೆ ಎಂದು ಪಹಲ್ಗಾಂಗೆ ಬಂದಿದ್ದ ಶುಭಂ ದ್ವಿವೇದಿ ಅವರು ಕೂಡ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಇದೀಗ ಪ್ರತಿಕಾರದ ಬಳಿಕ ಶುಭಂ ದ್ವಿವೇದಿ ಅವರ ಪತ್ನಿ ಅಶಾನ್ಯ ದ್ವಿವೇದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ:‘ಭಾರತ ನಡೆಸಿದ ದಾಳಿಯನ್ನ ಯುದ್ದವೆಂದೇ ಪರಿಗಣಿಸುತ್ತೇವೆ’; ಪಾಕಿಸ್ತಾನ ಪ್ರಧಾನಿ ಶಹಬಾಜ್​ ಷರೀಫ್​

ಈ ಕುರಿತು ಅಂತರ್​ ರಾಷ್ಟ್ರೀಯ ಮಾಧ್ಯಮವಾದ ಎಎನ್​ಐಗೆ ಅಶಾನ್ಯ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದು. “ನನ್ನ ಪತಿಯ ಸಾವಿಗೆ ಸೇಡು ತೀರಿಸಿಕೊಂಡ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಇಡೀ ಕುಟುಂಬ ಅವರ ಮೇಲೆ ನಂಬಿಕೆ ಇಟ್ಟಿತ್ತು, ಮತ್ತು ಅವರು (ಪಾಕಿಸ್ತಾನಕ್ಕೆ) ಪ್ರತಿಕ್ರಿಯಿಸಿದ ರೀತಿ ನಮ್ಮ ನಂಬಿಕೆಯನ್ನು ಜೀವಂತವಾಗಿರಿಸಿದೆ. ಇದು ನನ್ನ ಪತಿಗೆ ನೀಡುವ ನಿಜವಾದ ಗೌರವ. ನನ್ನ ಪತಿ ಎಲ್ಲೇ ಇದ್ದರೂ, ಅವರು ಇಂದು ಶಾಂತಿಯಿಂದ ಇರುತ್ತಾರೆ,” ಎಂದು ಅಶಾನ್ಯಾ ದ್ವಿವೇದಿ ANI ಗೆ ತಿಳಿಸಿದರು.

ಇದನ್ನೂ ಓದಿ:ಪಾಕಿಸ್ತಾನದ ಜೆಎಫ್​-17 ಯುದ್ದ ವಿಮಾನಗಳನ್ನು ಹೊಡೆದುರುಳಿಸಿದ ವಾಯುಪಡೆ..!

ಮೇ 3 ರಂದು, ಅಶಾನ್ಯಾ ದ್ವಿವೇದಿ ಅವರು ಪ್ರಯಾಗ್‌ರಾಜ್‌ನ ಸಂಗಮದಲ್ಲಿ ವೇದ ಮಂತ್ರಗಳ ಪಠಣದ ನಡುವೆ ತಮ್ಮ ಪತಿಯ ಚಿತಾಭಸ್ಮವನ್ನು ವಿಸರ್ಜಿಸಿದರು. ಶುಭಂ ದ್ವಿವೇದಿ ಅವರು ತಮ್ಮ ಪತ್ನಿ ಮತ್ತು ಅತ್ತಿಗೆಯೊಂದಿಗೆ ಪಹಲ್ಗಾಮ್‌ನ ಬೈಸರನ್ ಕಣಿವೆಗೆ ಭೇಟಿ ನೀಡಿದರು. ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದಾಗ ಅವರು ಪ್ರಾಣ ಕಳೆದುಕೊಂಡರು. ದ್ವಿವೇದಿ ಕಾನ್ಪುರದವರಾಗಿದ್ದು, ಈ ವರ್ಷ ಫೆಬ್ರವರಿ 12 ರಂದು ವಿವಾಹವಾದರು. ಭಯೋತ್ಪಾದಕ ದಾಳಿಯ ಸಮಯದಲ್ಲಿ ಅವರ ತಲೆಗೆ ಗುಂಡು ಹಾರಿಸಲಾಯಿತು.

RELATED ARTICLES

Related Articles

TRENDING ARTICLES