ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತದ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಇದರ ಬಗ್ಗೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು. ‘ಪಾಕ್ ವಿರುದ್ದ ಗೆದ್ದಿದ್ದೀವಿ ಅನ್ನೋ ಖುಷಿ ಬೇಡ, ನಿಮ್ಮ ಅಕ್ಕ-ಪಕ್ಕದಲ್ಲಿರುವ ಅನುಮಾನಸ್ಪದ ವ್ಯಕ್ತಿಗಳ ಮೇಲೆ ಎಚ್ಚರಿಕೆ ಇರಲಿ’ ಎಂದು ಹೇಳಿದರು.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತ ಭಯೋತ್ಪಾದಕರ ವಿರುದ್ದ ಕಾರ್ಯಚರಣೆ ಕೈಗೊಂಡಿದ್ದು. ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಕುರಿತು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದ್ದು ‘ ಪಾಕ್ ಉಗ್ರರ ಮೇಲೆ ದಾಳಿ ನಡೆಸಿರೋದು ಖುಷಿ ವಿಚಾರ, ಆದರೆ ಗೆದ್ದಿದ್ದೀವಿ ಅಂತಾ ಖುಷಿ ಪಡೋದು ಬೇಡ, ಎಲ್ಲರೂ ಸದಾ ಅಲರ್ಟ್ ಆಗಿರಿ.
ಇದನ್ನೂ ಓದಿ :‘ಆಪರೇಷನ್ ಸಿಂಧೂರ್’ ಕೇವಲ ಧ್ಯೇಯವಲ್ಲ, ಇದೊಂದು ಪವಿತ್ರ ಪ್ರತಿಜ್ಞೆ: ನಟ ಸುದೀಪ್
ಪಾಕಿಸ್ತಾನದ ಉಗ್ರರು ಸರಿಯಲ್ಲ, ಅವರುಯಾವ ಕ್ಷಣದಲ್ಲಾದರು ಪ್ರತೀಕಾರಕ್ಕಾಗಿ ದಾಳಿ ಮಾಡಬಹುದು. ಆದ್ದರಿಂದ ಎಲ್ಲರೂ ಜಾಗರೂಕರಾಗಿದೆ. ಅಕ್ಕ-ಪಕ್ಕದ ಮನೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಇದ್ದರೆ ಅಥವಾ ಚಟುವಟಿಕೆ ನಡೆಯುತ್ತಿದ್ದರೆ. ಆ ಕುರಿತು ದೂರು ನೀಡಿ. ಅಲ್ಲದೇ ಭಾರತದ ಒಳಗೆ ಲಕ್ಷಾಂತರ ಪಾಕ್, ಬಾಂಗ್ಲಾ ವಲಸಿಗರು ಇದ್ದಾರೆ. ಅವರೆಲ್ಲರ ವೀಸಾ, ಪಾಸ್ಪೋರ್ಟ್ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದರು.