Tuesday, May 6, 2025

ಹಳೆ ವೈಷಮ್ಯ: ಫಿಲ್ಡ್​​ನಲ್ಲಿ ಹೆಸರು ಮಾಡಲು ರೌಡಿಶೀಟರ್​ ಬರ್ಬರ ಹ*ತ್ಯೆ

ದಾವಣಗೆರೆ : ಹಳೆ ವೈಶಮ್ಯಕ್ಕೆ ರೌಡಿ ಶೀಟರ್​ ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು. ಕೊಲೆಯಾದ ರೌಡಿಶೀಟರ್​ನನ್ನು 48 ವರ್ಷದ ಸಂತೋಷ್​ ಅಲಿಯಾಸ್​ ಕಣುಮಾ ಎಂದು ಗುರುತಿಸಲಾಗಿದೆ.

ನಿನ್ನೆ (ಮೇ.05) ಸಂಜೆ ಐದು ಗಂಟೆಗೆ ದಾವಣಗೆರೆ ನಗರದ ಹದಡಿ ರಸ್ತೆಯ ಕ್ಲಬ್​ ಒಂದರಲ್ಲಿ ಘಟನೆ ನಡೆದಿದ್ದು. ಕ್ಲಬ್​ನಲ್ಲಿದ್ದ ಸಂತೋಷ್​ನನ್ನು ರೌಡಿಗಳ ಗುಂಪೊಂದು ಭೀಕರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದೆ. ಸುಮಾರು 5 ಜನರ ಗುಂಪೊಂದು ಮಾರಕಾಸ್ತ್ರದೊಂದಿಗೆ ಕ್ಲಬ್​ ಒಳಗೆ ಎಂಟ್ರಿ ಕೊಟ್ಟಿದ್ದು ಸಂತೋಷ್​ನನ್ನು ನೋಡುತ್ತಿದ್ದಂತೆ ಆತನ ಮೇಲೆ ಎರಗಿದೆ.

ಇದನ್ನೂ ಓದಿ :ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದ ವಧು ಹೃದಯಘಾತದಿಂದ ಸಾ*ವು

ಆಟ್ಯಾಕ್​ ಮಾಡಿರುವ ದೃಷ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಕೇವಲ 37 ಸೆಕೆಂಡ್​ಗಳಲ್ಲಿ ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯ ಮತ್ತು ಫಿಲ್ಡ್​ನಲ್ಲಿ ಹೆಸರು ಮಾಡಲು ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದು. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES