Sunday, May 4, 2025

ಅತ್ಯಾಚಾರವೆಸಗಿ ಎನ್​ಕೌಂಟರ್​ಗೆ ಬಲಿಯಾಗಿದ್ದ ಕಾಮುಕನ ಶವಕ್ಕೆ ಕೊನೆಗೂ ಮುಕ್ತಿ ಕೊಟ್ಟ ಪೊಲೀಸರು

ಹುಬ್ಬಳ್ಳಿ : ಕಳೆದ ಏಪ್ರೀಲ್​ 13ರಂದು 5 ವರ್ಷದ ಬಾಲಕಿ ಮೇಲೆ ಅತ್ಯಚಾರವೆಸಗಿದ್ದ ಕಾಮುಕನನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದರು. ಇಷ್ಟು ದಿನವಾದರೂ ಆತನ ಕುಟುಂಬಸ್ಥರು ಪತ್ತೆಯಾಗದ ಹಿನ್ನೆಲೆ ಆತನ ಶವದ ಅಂತಿಮ ಸಂಸ್ಕಾರವನ್ನು ಪೊಲೀಸರೆ ಮಾಡಿ ಮುಗಿಸಿದ್ದಾರೆ.

ಇದನ್ನೂ ಓದು :‘ಉಗ್ರ ದಾಳಿಗೆ ಕನ್ನಡ ಕಾರಣ’ ಎಂದಿದ್ದ ಗಾಯಕ ಸೋನು ನಿಗಮ್​ ವಿರುದ್ದ FIR ದಾಖಲು

ಕಳೆದ ಏಪ್ರೀಲ್​ 13ರಂದು ಹುಬ್ಬಳ್ಳಿಯಲ್ಲಿ ನಡೆದ ರೇಪ್​ ಆಂಡ್​ ಮರ್ಡರ್​ ಕೇಸ್​ ಇಡೀ ದೇಶಾಧ್ಯಂತ ಸುದ್ದಿಯಾಗಿತ್ತು. ಬಿಹಾರ್​ ಮೂಲದ ರಿತೇಶ್​ ಕುಮಾರ್​ ಎಂಬಾತ ಮನೆಯ ಬಳಿ ಆಟವಾಡುತ್ತಿದ್ದ 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿದ್ದ. ಘಟನೆ ಸಂಬಂಧ ಹುಬ್ಬಳ್ಳಿಯಲ್ಲಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದರು. ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು. ಕೂಡಲೇ ಎಚ್ಚೆತ್ತು ಆರೋಪಿಯ ಬಂಧನಕ್ಕೆ ಮುಂದಾಗಿದ್ದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ :Viral Video: ಪ್ರೇಯಸಿ ಜೊತೆ ನೂಡಲ್ಸ್​ ತಿನ್ನುತ್ತಿದ್ದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಪೋಷಕರು

ಆದರೆ ಆರೋಪಿ ರಿತೇಶ್​ ಕುಮಾರ್​ನನ್ನು ಬಂಧಿಸಲು ಹೋದಾಗ ಪೋಲಿಸರ ಮೇಲೆ ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಆರೋಪಿಯನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರು. ಆದರೆ ಅಂದಿನಿಂದಲೂ ಆರೋಪಿಯ ಶವ ಕಿಮ್ಸ್​ ಆಸ್ಪತ್ರೆಯ ಶವಗಾರದಲ್ಲಿತ್ತು. ಆರೋಪಿ ಶವದ ಪೋಸ್ಟಮಾರ್ಟ್ ಮಾಡಿ ಮುಗಿಸಿದ್ದ ವೈದ್ಯರು ಆತನ ಶವವನ್ನು ರಕ್ಷಿಸಿದ್ದರು. ಹೈಕೋರ್ಟ್ ಕೂಡ ಆರೋಪಿ ಶವಸಂಸ್ಕಾರಕ್ಕೆ ಅನುಮತಿ ನೀಡಿತ್ತು.

ಪೊಲೀಸರು ಆರೋಪಿ ರಿತೇಶ್​ ಕುಮಾರ್​ ಕುಟುಂಬಸ್ಥರಿಗಾಗಿ ಅನೇಕ ಕಡೆ ಪರಿಶೀಲನೆ ನಡೆಸಿದ್ದರು. ಆದರೆ ಸಂಬಂಧಿಗಳು ಪತ್ತೆಯಾಗದ ಹಿನ್ನಲ್ಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಮ್ಮುಖದಲ್ಲಿ ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಆರೋಪಿ ರಿತೇಶ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿದೆ.

RELATED ARTICLES

Related Articles

TRENDING ARTICLES