Sunday, May 4, 2025

ಮಧ್ಯರಾತ್ರಿವರೆಗೆ ಹಾಲ್​ಟಿಕೆಟ್​ ವಿತರಣೆ: ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾದ KPSC

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನೇಮಕಾತಿಗೆ ಪರೀಕ್ಷೆ ನಡೆಸುವ ಕೆಪಿಎಸ್​ಸಿ ಸಂಸ್ಥೆ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು. ತರಾತುರಿಯಲ್ಲಿ ಇಂದು(ಮೇ.03) ಕೆಪಿಎಸ್​​ಸಿ ಪರೀಕ್ಷೆ ನಡೆಸುತ್ತಿದೆ. ಅಷ್ಟೇ ಅಲ್ಲದೇ ಇನ್ನೂ ನೂರಾರು ವಿದ್ಯಾರ್ಥಿಗಳು ಹಾಲ್​ಟಿಕೆಟ್​ ಕೂಡ ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 10 ಗಂಟೆಗೆ ಮೇನ್ಸ್ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಂ ನಡೆಯುತ್ತಿದೆ. ಆದರೆ ಇನ್ನೂ ಹಲವಾರು ಅಭ್ಯರ್ಥಿಗಳಿಗೆ ಹಾಲ್​ ಟಿಕೆಟ್​​ ಸಿಕ್ಕಿಲ್ಲ ಎಂಬ ಕೂಗು ಕೇಳಿಬಂದಿದೆ. KAT ನಲ್ಲಿ ಪಿಟಿಷಿಯನ್ ಹಾಕಿದವರಿಗೆ ಇನ್ನೂ ಹಾಲ್​ ಟಿಕೆಟ್​​ ಸಿಗದಿದ್ದು, ಬರೋಬ್ಬರಿ 350 ಅಭ್ಯರ್ಥಿಗಳ ಭವಿಷ್ಯದ ಜೊತೆಗೆ ಕೆಪಿಎಸ್​​ಸಿ ಚೆಲ್ಲಾಟ ಆಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ತಡರಾತ್ರಿ 3 ಗಂಟೆಯವರೆಗೂ ಹಾಲ್​ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಚೊಚ್ಚಲ ಮಗುವಿಗೆ ಚಂದದ ಹೆಸರಿಟ್ಟ ನಟಿ ಹರ್ಷಿಕಾ ಪೂಣಚ್ಚ ದಂಪತಿ

ಅಷ್ಟೇ ಅಲ್ಲದೇ ಪ್ರಿಲಿಮ್ಸ್​ ಪರೀಕ್ಷೆಯಲ್ಲಿ ಭಾಷಾಂತರದ ಸಮಸ್ಯೆ ಇದ್ದ ಕಾರಣ ವಿದ್ಯಾರ್ಥಿಗಳು ಹೈಕೋರ್ಟ್​ ಮೆಟ್ಟಿಲೇರಿದ್ದು.ಸೋಮವಾರ ಹೈ ಕೋರ್ಟ್ ಅಂತಿಮ ತೀರ್ಪು ನೀಡಲಿದೆ. ಈ ನಡುವೆಯೇ ಮೇನ್ಸ್ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಂಗೆ ಮುಂದಾಗಿದೆ. ನಿನ್ನೆ ಸಂಜೆಯಿಂದ ಮೇನ್ಸ್ ಎಕ್ಸಾಂಗೆ ಹಾಲ್ ಟಿಕೆಟ್ ನೀಡಿ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಹೈಕೋರ್ಟ್​ನಿಂದ ಆದೇಶ ಬರುವ ಮೊದಲೆ ಎಕ್ಸಾಂ ಮಾಡಲು ಮುಂದಾಗಿರುವ ಕೆಪಿಎಸ್​ಸಿ ವಿರುದ್ದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಗೋವಾದ ಶಿರ್ಗಾಂವ್‌​​​ ದೇವಸ್ಥಾನದಲ್ಲಿ ಕಾಲ್ತುಳಿತ: 6 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಅಭ್ಯರ್ಥಿಗಳ ಮುಂದೆಯೇ ಹಾಲ್​ಟಿಕೆಟ್​ ಪ್ರಿಂಟ್​ ಮಾಡಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಕೇವಲ ಹೆಸರು, ಪೋಟೊ ಕೇಳಿ ಅಲ್ಲೇ ಹಾಲ್​ ಟಿಕೆಟ್​ ಪ್ರಿಂಟ್ ಮಾಡಿಕೊಟ್ಟಿದ್ದಾರೆ, ಹಾಲ್​ಟಿಕೆಟ್​ನಲ್ಲಿ ಕ್ಯೂಆರ್​ ಕೋಡ್​ ಇಲ್ಲದಿರುವುದು ಕೆಪಿಎಸ್​ಸಿ ಮೇಲೆ ಅನುಮಾನಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES