Thursday, May 1, 2025

ಪಕ್ಕದ ಮನೆಯವನಿಂದ ಲೈಂಗಿಕ ಕಿರುಕುಳ: ಅಪ್ರಾಪ್ತ ಬಾಲಕಿ ಆತ್ಮಹ*ತ್ಯೆ

ಬಳ್ಳಾರಿ: ಪಕ್ಕದ ಮನೆಯವನ ಮಾನಸಿಕ, ದೈಹಿಕ ಕಿರುಕುಳಕ್ಕೆ ನೊಂದು ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ತನ್ನ ಪಕ್ಕದ ಮನೆಯ ವ್ಯಕ್ತಿ ಸುರೇಶ ಎಂಬವನ ಹೆಸರನ್ನು ಡೆತ್​ನೋಟ್ ನಲ್ಲಿ ಬರೆದಿಟ್ಟು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಭಂಗ ಮಾಡಿ, ಕಿರುಕುಳ ನೀಡಿದ್ದಾನೆ. ಅವನನ್ನು ಬಿಡಬೇಡಿ ಎಂದು ಅಪ್ರಾಪ್ತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಘಟನೆ..!

ನಿನ್ನೆ ಬಾಲಕಿಯ ಪೋಷಕರು ಸಂಬಂಧಿಕರ ಮದುವೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವ್ಯಕ್ತಿ ಬಾಲಕಿಯ ಮೇಲೆ ಎರಗಿದ್ದ ಎಂಬ ಆರೋಪ ಕೇಳಿ ಬಂದಿದೆ.ಸದ್ಯ ಆರೋಪಿ ಸುರೇಶನನ್ನು ತೋರಣಗಲ್ ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ :‘ಆಪರೇಷನ್ ಕಾಡಾನೆ ಸಕ್ಸಸ್’​ ; ರೈತನನ್ನು ಬಲಿಪಡೆದಿದ್ದ ಕಾಡಾನೆಗೆ ಖೆಡ್ಡಾ ತೋಡಿದ ಅರಣ್ಯ ಇಲಾಖೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಜಾತಿಯ ರಕ್ಷಣೆಗಾಗಿ ಹಲವಾರು ಕಾನೂನು ಜಾರಿಗೆ ತಂದ್ರು, ಮನುಷ್ಯ ಮೃಗವಾಗಿ ಬದಲಾಗುವುದು ಬಿಟ್ಟಿಲ್ಲ. ಈ ರೀತಿಯ ಕಾಮ ಕೃತ್ಯಗಳು ಮಾಡಿ ಹೆಣ್ಣನ್ನು ಬೋಗ ವಸ್ತುವಾಗಿ ನೋಡುವ ಕಾಮುಕರಿಗೆ ಶಿಕ್ಷೆಯಾಗಬೇಕು ಎನ್ನುವುದು ಪ್ರತಿಯೊಬ್ಬರ ವಾದ.

RELATED ARTICLES

Related Articles

TRENDING ARTICLES