Friday, April 25, 2025

ಸ್ಮಾರ್ಟ್​ ಮೀಟರ್​ ಅಳವಡಿಕೆಗೆ ಹೈಕೋರ್ಟ್​ ತಡೆ: ಪವರ್ ಟಿವಿಯ ಬಿಗ್​ ಇಂಪ್ಯಾಕ್ಟ್​

ಬೆಂಗಳೂರು : ಪವರ್​ ಟಿವಿ ನಿರಂತರವಾಗಿ ವರದಿ ಮಾಡಿದ್ದ ಸ್ಮಾರ್ಟ್​ ಮೀಟರ್​​ ಹಗರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು. ಸ್ಮಾರ್ಟ್ ಮೀಟರ್​ ಅಳವಡಿಕೆಗೆ ರಾಜ್ಯ ಹೈಕೋರ್ಟ್​ ತಡೆ ನೀಡಿದೆ.

ಇಂಧನ ಇಲಾಖೆಯಲ್ಲಿ ನಡೆದಿರುವ ಅತಿದೊಡ್ಡ ಸ್ಮಾರ್ಟ್​ ಮೀಟರ್ ಹಗರಣದ ಬಗ್ಗೆ ಪವರ್​ ಟಿವಿ ನಿರಂತರವಾಗಿ ವರದಿ ಭಿತ್ತರಿಸಿತ್ತು. ಸಚಿವ ಕೆ.ಜೆ ಜಾರ್ಜ್​ ಮತ್ತು ಇಂಧನ ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರದ ಮುಖವಾಡವನ್ನ ರಾಜ್ಯದ ಜನದ ಮುಂದೆ ತೆರೆದಿಟ್ಟಿತ್ತು. ಸ್ಮಾರ್ಟ್​ ಮೀಟರ್​ ಹೆಸರಿನಲ್ಲಿ ಇಂಧನ ಇಲಾಖೆ ನಡೆಸಲು ಸಿದ್ದವಾಗಿದ್ದ ಸಾವಿರಾರು ಕೋಟಿ ಹಗರಣದ ಬಗ್ಗೆ ಇಂಚಿಂಚು ವರದಿಯನ್ನು ಭಿತ್ತರಿಸಲಾಗಿತ್ತು. ಈ ಕುರಿತು ರಾಜ್ಯ ಬಿಜೆಪಿಯು ಕೂಡ ಲೋಕಾಯುಕ್ತಗೂ ದೂರು ನೀಡಿತ್ತು. ಇದೀಗ ಈ ಹಗರಣ ಹೈಕೋರ್ಟ್​ ಮೆಟ್ಟಿಲೇರಿದ್ದು. ಸ್ಮಾರ್ಟ್​ ಮೀಟರ್​ ಅಳವಡಿಕೆಗೆ ಹೈಕೋರ್ಟ್​ ತಡೆ ನೀಡಿದೆ. ಇದನ್ನೂ ಓದಿ :ಸಾವರ್ಕರ್​ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ, ನೀವೇನು ಮಾಡಿದ್ದೀರಿ: ಸುಪ್ರೀಂ ಪ್ರಶ್ನೆ, ರಾಹುಲ್​ಗೆ ಮುಖಭಂಗ

ಸ್ಮಾರ್ಟ್ ಮೀಟರ್ ಹಗರಣದ ಕುರಿತು ಅರ್ಜಿದಾರರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಪೀಠ ‘ಹೊರ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್​ಗೆ 900 ರೂಪಾಯಿ ಇದೆ. ಆದರೆ ನಮ್ಮಲ್ಲಿ ಯಾಕೆ 5,810 ರೂಪಾಯಿ ಇದೆ..?. ಜೊತೆಗೆ KERC ಸ್ಮಾರ್ಟ್​ ಮೀಟರ್​ ಅಳವಡಿಕೆ ಕಡ್ಡಾಯ ಎಂದು ಆದೇಶಿಸಿದೆ. ಈ ರೀತಿ ಆದೇಶಿಸಿದರೆ ಬಡವರು ಎಲ್ಲಿಗೆ ಹೋಗಬೇಕು. ದುಡ್ಡು ಇದ್ದವರು ಸ್ಮಾರ್ಟ್​ ಮೀಟರ್​ ಹಾಕಿಸಿಕೊಳ್ಳುತ್ತಾರೆ. ಇಲ್ಲದವರು ಸುಮ್ಮನಿರುತ್ತಾರೆ ಎಂದು ಇಂಧನ ಇಲಾಖೆಗೆ ಚಾಟಿ ಬೀಸಿತು.

ಇದನ್ನೂ ಓದಿ :ದಾಯಾದಿ ಕಲಹ: ಸತ್ತು ಮೂರು ದಿನವಾದರೂ ಅಂತ್ಯಕ್ರಿಯೆ ಮಾಡದ ಕುಟುಂಬಸ್ಥರು

ಇನ್ನು ಸ್ಮಾರ್ಟ್​ ಮೀಟರ್​ ಅಳವಡಿಕೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದ್ದು. ಬೆಸ್ಕಾಂ ಪರ ವಕೀಲರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಜೂನ್​ 4ಕ್ಕೆ ಮುಂದೂಡಿದ್ದು. ಪವರ್​ ಟಿವಿ ವರದಿಗೆ ಮೊದಲ ಜಯ ಸಿಕ್ಕಂತಾಗಿದೆ.

RELATED ARTICLES

Related Articles

TRENDING ARTICLES