Wednesday, April 23, 2025

ಕಾಶ್ಮೀರಿ ಅಥಿತಿಗಳನ್ನು ಕೊಲ್ಲಬೇಡಿ ಎಂದು ಅಡ್ಡಬಂದ ಮುಸ್ಲಿಂ ಯುವಕ ಉಗ್ರರ ಗುಂಡಿಗೆ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 26 ಜನ ಬಲಿಯಾಗಿದ್ದು, ಭಯೋತ್ಪಾದಕರ ದಾಳಿಯನ್ನು ತಡೆಯಲು ಬಂದ ಸ್ಥಳೀಯ ಮುಸ್ಲಿಂ ಯುವಕನೋರ್ವ ಘಟನೆಯಲ್ಲಿ ಅಸುನೀಗಿದ್ದು ಮೃತ ಯುವಕನನ್ನು ಸೈಯದ್​ ಆಧಿಲ್ ಹುಸೇನ್​ ಶಾ ಎಂದು ಗುರುತಿಸಲಾಗಿದೆ.

ಸೈಯದ್​ ಆಧಲ್​ ಹುಸೇನಿ ಶಾ ಪಹಲ್ಗಾಮ್​ನಲ್ಲಿ ಕುದುರೆ ರೈಡರ್​ ಆಗಿ ಕೆಲಸ ಮಾಡುತ್ತಿದ್ದರು. ಪ್ರವಾಸಕ್ಕೆ ಬರುವ ಅತಿಥಿಗಳನ್ನು ಕುದುರೆ ಮೇಲೆ ಕೂರಿಸಿಕೊಂಡು ಕಾಶ್ಮೀರದ ಸೌಂದರ್ಯ ದರ್ಶನ ಮಾಡಿಸುತ್ತಿದ್ದರು. ಆದರೆ, ನೆನ್ನೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸುವ ವೇಳೆ ಸ್ಥಳದಲ್ಲಿ ಸೈಯದ್​ ಆದಿಲ್​ ಹುಸೇನಿ ಶಾ ಸಹ ಇದ್ದರು. ಈ ಸಂದರ್ಭದಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿದ್ದ ಉಗ್ರರಿಂದ ಬಂದೂಕು ಕಸಿದುಕೊಳ್ಳಲು ಯತ್ನಿಸಿ, ಕಾಶ್ಮೀರಕ್ಕ ಬಂದ ಅಥಿತಿಗಳನ್ನು ಕೊಲ್ಲಬೇಡಿ ಎಂದು ಬೇಡಿಕೊಂಡ ಉಗ್ರರು ಸೈಯದ್​ ಮೇಲೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ :ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯದಿಂದ ಉಗ್ರ ದಾಳಿಯಾಗಿದೆ: ಸಿಎಂ ಸಿದ್ದರಾಮಯ್ಯ

ಸೈಯದ್‌ ತಂದೆ ಹೈದರ್ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ನನ್ನ ಮಗ ನಿನ್ನೆ ಕೆಲಸಕ್ಕೆಂದು ಪಹಲ್ಗಾಮ್‌ಗೆ ಹೋಗಿದ್ದ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ಬಗ್ಗೆ ನಮಗೆ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಜೆ 4:40ಕ್ಕೆ ಅವನ ಫೋನ್ ಆನ್ ಆಯ್ತು. ಆದರೆ, ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ಧಾವಿಸಿದೆವು. ಆಗ ಅವನಿಗೆ ಗಾಯವಾಗಿರುವುದು ಗೊತ್ತಾಯಿತು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES