Saturday, April 19, 2025

ಜಾತಿಗಣತಿ ವರದಿ ಜಾರಿ ಮಾಡಲು ಇನ್ನು ಒಂದು ವರ್ಷವಾಗುತ್ತೆ : ಸತೀಶ್​ ಜಾರಕಿಹೊಳಿ

ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಜಾತಿಗಣತಿ ವರದಿ ಕಿಚ್ಚು ಹೆಚ್ಚಾಗಿದ್ದು. ಈ ಕುರಿತು ಸಚಿವ ಸತೀಶ್​ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಜಾತಿ ಜನಗಣತಿ ವರದಿ ಸ್ವೀಕಾರಕ್ಕೆ 10 ವರ್ಷದ ಸಮಯ ಹಿಡಿದಿದೆ. ಇದನ್ನು ಜಾರಿ ಮಾಡಲು ಇನ್ನು ಒಂದು ವರ್ಷವಾಗುತ್ತದೆ ಎಂದು ಹೇಳಿದರು.

ಜಾತಿಜನಗಣತಿ ವರದಿ ರಾಜ್ಯದಲ್ಲಿ ಕಿಚ್ಚೆಬ್ಬಿಸಿದ್ದು. ಇದರ ಕುರಿತು ನೆನ್ನೆ ನಡೆದ ಕ್ಯಾಬಿನೆಟ್​ ಸಭೆಯಲ್ಲೂ ಯಾವುದೇ ನಿರ್ಣಯ ಅಂಗೀಕಾರವಾಗಿಲ್ಲ, ಸಚಿವ ಸಂಪುಟ ಸಭೆಯಲ್ಲಿ ಸ್ವಪಕ್ಷದ ಸಚಿವರ ನಡುವೆಯೇ ವಾಗ್ವಾದವಾಗಿದೆ ಎಂದು ತಿಳಿದು ಬಂದಿದ್ದು. ಮುಂದಿನ ಕ್ಯಾಬಿನೆಟ್​ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿ ಕಾನೂನು ಸಚಿವ ಎಚ್​.ಕೆ ಪಾಟೀಲ್​ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ :ಚೀನಾಗೆ ರಫ್ತು ಮಾಡಲು ಸಂಗ್ರಹಿಸಿಟ್ಟಿದ್ದ 400 ಕೆಜಿ ಕೂದಲು ಕಳ್ಳತನ

ಜಾತಿಗಣತಿ ವರದಿಯ ಕುರಿತು ಸಚಿವ ಎಚ್​.ಕೆ ಪಾಟೀಲ್​ ಹೇಳಿಕೆ ನೀಡಿದ್ದು. ಜಾತಿಗಣತಿ ವರದಿ ಎಂಬುದು ಬಹಳ ಜಟಿಲ ಸಮಸ್ಯೆಯಾಗಿದೆ. ಇದರ ಬಗ್ಗೆ ಇನ್ನು ಬಹಳಷ್ಟು ಚರ್ಚೆಯಾಗಬೇಕಿದೆ. ಹೀಗಾಗಿ ಈ ವರದಿಯನ್ನು ಅಂಗೀಕರಿಸಲು ಇನ್ನು ಒಂದು ವರ್ಷ ಸಮಯವಾಗಬಹುದು. ವರದಿ ಸ್ವೀಕಾರಕ್ಕೆ 10 ವರ್ಷ ಸಮಯ ತೆಗೆದುಕೊಂಡಿದೆ. ವರದಿ ಅಂಗೀಕರಿಸಲು ಸಮಯವಿಡಿಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ :ಜನಿವಾರ ಧರಿಸಿದಕ್ಕೆ ಪರೀಕ್ಷೆ ಕೊಡಲ್ಲ ಎಂದ ಸಿಬ್ಬಂದಿ; ವಿದ್ಯಾರ್ಥಿ ತಾಯಿ ಕಣ್ಣೀರು

ಜಾತಿ ಜನಗಣತಿಯ ಅಂಕಿ ಸಂಖ್ಯೆಯನ್ನು ಜನರೇ ಬರೆಸಿದ್ದಾರೆ. ಈ ವರದಿಗೆ ಯಾರೂ ಸಹಿ ಮಾಡಿದ್ದಾರೋ, ಅವರೇ ಇದೀಗ ವರದಿಯ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಈ ವರದಿ ಕುರಿತು ಸಮಗ್ರ ಚರ್ಚೆಯಾಗಬೇಕು, ಆಗ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ. ಸಾದರ ಸಮಾಜದ ಜನರನ್ನು ಕಡಿಮೆ ಎಂದು ತೋರಿಸಲಾಗಿದೆ. ಸಾದರ ಜನರು ಕೇವಲ 64 ಸಾವಿರ ಎಂದು ತೋರಿಸಿದ್ದಾರೆ. ಆದರೆ ಅವರು ಮೂರು ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಅವರು ಧ್ವನಿ ಎತ್ತಿದ್ದಾರೆ. ಈ ಎಲ್ಲಾ ಅಂಕಿ ಅಂಶಗಳನ್ನು ಸರಿ ಮಾಡಲು ಅವಕಾಶ ನೀಡಬೇಕಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES