ಉತ್ತರಪ್ರದೇಶ : ಶೀತ ಆಗಿದೆ ಎಂದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ 5 ವರ್ಷದ ಮಗುವಿಗೆ ವೈದ್ಯನೊಬ್ಬ ಸಿಗರೇಟ್ ಸೇದಿಸಿದ್ದು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಜಲೌನ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶೀತ ಮತ್ತು ಕೆಮ್ಮಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮುಗ್ದ ಹುಡುಗನಿಗೆ ಇಲ್ಲಿಯ ವೈದ್ಯನೊಬ್ಬ ಸಿಗರೇಟ್ ಸೇದುವಂತೆ ಮಾಡಿದ್ದು. ಮಗುವಿನ ಬಾಯಿಗೆ ಸಿಗರೇಟ್ ಇಟ್ಟು ಸೇದುವಂತೆ ಪ್ರಚೋದನೆ ನೀಡಿದ್ದಾನೆ. ಘಟನೆ ಸಂಬಂಧ ವಿಡಿಯೋ ವೈರಲ್ ಆಗಿದ್ದು. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯ ವೈದ್ಯಾಧಿಕಾರಿಗಳು ವೈದ್ಯನ ವಿರುದ್ದ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ.
ಇದನ್ನೂ ಓದಿ :ಭಾರತ ಸರ್ಕಾರ ತಂದ ವಕ್ಫ್ ಕಾಯ್ದೆ ಭಾರತದಲ್ಲಿ ನಿಲ್ಲೋದಿಲ್ಲ: ಸಿಎಂ ಇಬ್ರಾಹಿಂ
ಮಾಹಿತಿಯ ಪ್ರಕಾರ, ಐದು ವರ್ಷದ ಮಗುವೊಂದು ತನ್ನ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಜಲೌನ್ ಜಿಲ್ಲೆಯ ಕುಥೌಂಡ್ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ)ಕ್ಕೆ ಬಂದಿತ್ತು. ಅಲ್ಲಿ ವೈದ್ಯನಾಗಿದ್ದ ಸುರೇಶ್ ಚಂದ್ರ ಎಂಬ ವೈದ್ಯ ಮಗುವಿಗೆ ಸಿಗರೇಟ್ ಸೇದುವುದನ್ನು ತರಬೇತಿ ನೀಡಿದ್ದಾನೆ. ಮೊದಲು ಅವನೇ ಸಿಗರೇಟ್ ಸೇದಿ ನಂತರ ಮಗುವಿನ ಬಾಯಿಗೆ ಸಿಗರೇಟ್ ಇಟ್ಟು ಸೇದಲು ಹೇಳಿದ್ದಾನೆ.
ವೈದ್ಯನ ಸಲಹೆ ಮೇರೆಗೆ ಮಗು ಸಿಗರೇಟ್ ಸೇದಲು ಯತ್ನಿಸಿದೆ. ಆದರೆ ಅದು ಸಾಧ್ಯವಾಗದ ಕಾರಣ ವೈದ್ಯ ಇಂದಿಗೆ ಇಷ್ಟು ಸಾಕು. ನಾಳೆ ಬಾ ಇನ್ನಷ್ಟು ಕಲಿಸುತ್ತೇನೆ ಎಂದು ಹೇಳಿದ್ದಾನೆ. ಈ ಘಟನೆಯಲ್ಲಿ ಅಲ್ಲಿದ್ದ ಜನರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ :ಜನಿವಾರ ಜಟಾಪಟಿ; ಸರ್ಕಾರಕ್ಕೆ ಸಲಹೆ ಕೊಟ್ಟ ಸಿದ್ದಲಿಂಗ ಸ್ವಾಮೀಜಿಗಳು
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿಷಯ ತೀವ್ರಗೊಂಡಿತು. ಇದಾದ ನಂತರ, ಆರೋಪಿ ಡಾ. ಸುರೇಶ್ ಚಂದ್ರನನ್ನು ಬೇರೆ ಕಡೆಗೆ ವರ್ಗಾಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯ ವೈದ್ಯಾಧಿಕಾರಿ ಎನ್.ಡಿ. ಶರ್ಮಾ ಮಾತನಾಡಿ, ಈ ವಿಡಿಯೋ ಸುಮಾರು 15 ದಿನಗಳಷ್ಟು ಹಳೆಯದು. ಇದರ ಬಗ್ಗೆ ಕ್ರಮ ಕೈಗೊಂಡು, ACMO (ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ) ಅವರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.