Tuesday, April 15, 2025

ಕೊಲೆಘಾತುಕನ ಎನ್​​ಕೌಂಟರ್​ ಮಾಡಿ ದೇಶದ ಜನರ ಮನಗೆದ್ದ PSI ಅನ್ನಪೂರ್ಣ

ಹುಬ್ಬಳ್ಳಿ : 5 ವರ್ಷದ ಪುಟ್ಟ ಮಗುವನ್ನು ಕೊಲೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಎನ್​ಕೌಂಟರ್​ ಮಾಡಿದ್ದು. ಕೊಲೆಘಾತುಕನನ್ನು ಮುಗಿಸಿದ ಪಿಎಸ್​ಐ ಅನ್ನಪೂರ್ಣ ಇದೀಗ ದೇಶದ ಜನರ ಮನಗೆದ್ದಿದ್ದಾರೆ.

ಯಾರಿದು ಪಿಎಸ್​ಐ ಅನ್ನಪೂರ್ಣ..!

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಗುಜನಟ್ಟಿ ಗ್ರಾಮದ ಅನ್ನಪೂರ್ಣ ಅವರು, 2018ರ ಬ್ಯಾಚ್​ನ ಪಿಎಸ್​ಐ ಆಫೀಸರ್​. ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಅನ್ನಪೂರ್ಣ ಅವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯ ನೆರಳಲ್ಲಿ ಬದುಕಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿದ್ದ ಅನ್ನಪೂರ್ಣ, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿಯಲ್ಲಿ ಗೋಲ್ಡ್​ ಮೆಡಲ್​ ಪಡೆದಿದ್ದರು.

ಇದನ್ನೂ ಓದಿ :ಹಿರಿಯ ನಟ ಬ್ಯಾಂಕ್​ ಜನಾರ್ಧನ್​ ನಿಧನ; ತಂದೆಯ ಬಗ್ಗೆ ಮಗ ಹೇಳಿದ್ದೇನು

MSc ಪದವಿ ಪಡೆದರು ಅನ್ಯ ನೌಕರಿಗಳತ್ತ ಮುಖಮಾಡದೇ ಪೊಲೀಸ್​ ಇಲಾಖೆ ಆಯ್ಕೆ ಮಾಡಿದ್ದ ಅನ್ನಪೂರ್ಣ ಅವರು. ಐದು ವರ್ಷದ ಬಾಲಕಿಯನ್ನ ಕೊಂದು ಪರಾರಿಯಾಗಿದ್ದ ಹಂತಕನನ್ನು ಎನ್​ಕೌಂಟರ್​ ಮಾಡುವ ಮೂಲಕ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ ದೇಶದ ಜನರ ಮನಗೆದಿದ್ದಾರೆ. ದಿಟ್ಟಗತ್ತಿ ಪಿಎಸ್‌ಐ ಅನ್ನಪೂರ್ಣ ‌ಮಾಡಿದ ಸಾಹಸಕ್ಕೆ ಅಭಿಮಾನಗಳ ಮಹಾಪೂರವೇ ಹರಿದು ಬರುತ್ತಿದೆ.

RELATED ARTICLES

Related Articles

TRENDING ARTICLES