ಬೆಂಗಳೂರು : ಹೆಂಡತಿ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೋರ್ವ ರಾಜಭವನದ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ತಮಿಳುನಾಡು ಮೂಲದ ಟೆಕ್ಕಿ ಜುಹೈದ್ ಅಹ್ಮದ್ ಎಂದು ಗುರುತಿಸಲಾಗಿದೆ.
ರಾಜ್ಯಪಾಲರ ನಿವಾಸ ರಾಜಭನದ ಬಳಿ ಹೈಡ್ರಾಮವೇ ಸೃಷ್ಟಿಯಾಗಿದ್ದು. ವ್ಯಕ್ತಿಯೋರ್ವ ತನ್ನ ಪತ್ನಿ ಕಿರುಕುಳ ಕೊಡುತ್ತಿದ್ದಾಳೆ ಎಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಡೆತ್ ನೋಟ್ ಬರೆದಿರುವ ಜುಹೈದ್, ಪತ್ನಿ ಜವೇರಿಯಾ ಮುಸ್ಕಾನ್ ವಿರುದ್ದ ಕಿರುಕುಳದ ಆರೋಪ ಮಾಡಿದ್ದಾನೆ.
ಇದನ್ನೂ ಓದಿ :ಆಧುನಿಕ ವಿಜ್ಞಾನಕ್ಕೂ ಸವಾಲಾಗಿ ನಿಂತಿದೆ ಈ ಬಂಡೆ; ಇದರ ಹಿಂದಿದೆ ಶ್ರೀ ಕೃಷ್ಣನ ಪವಾಡ
ಆತ್ಮಹತ್ಯೆಗೆ ಕಾರಣವೇನು..!
ಮೂಲತಃ ಚಿಕ್ಕಬಳ್ಳಾಪುರ ಜವೇರಿಯಾ ಮುಸ್ಕಾನ್ ತನ್ನ ಪತಿಗೆ ಪದೇ ಪದೇ ವಿಚ್ಚೇದನ ಕೊಡುವುದಾಗಿ ಹೆದರಿಸುತ್ತಿದ್ದಳು ಎನ್ನಲಾಗಿದ್ದು. ಪತಿ ಜುಹೈದ್ ಸಿಗರೇಟ್ ಸೇದುತ್ತಾನೆ ಎಂಬ ಕಾರಣವಿಟ್ಟುಕೊಂಡು ವಿಚ್ಚೇದನ ನೀಡುವುದಾಗಿ ಬೆದರಿಸುತ್ತಿದ್ದಳು. ಸುಳ್ಳು ಕೇಸ್ ಹಾಕಿಸಿ ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ತಿಳಿದು ಬಂದಿದೆ.
ಜೊತೆಗೆ ಪತಿ ಜುಹೈದ್ ಮತ್ತು ಆತನ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿಸಿದ್ದಾಳೆ ಎಂದು ಜುಹೈದ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದು. ಚಿಕ್ಕಬಳ್ಳಾಪುರದ ಸ್ಥಳೀಯ ಕಾಂಗ್ರೆಸ್ ಲೀಡರ್ಗಳಿಂದ ಏಪ್ರಿಲ್ 11 ಕೊಲೆ ಬೆದರಿಕೆಗೆ ಹಾಕಿಸಿಲಾಗಿದೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.