Tuesday, April 15, 2025

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದ ಪತ್ನಿ, ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಿರಾತಕ

ಮಂಡ್ಯ : ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಒಪ್ಪದ ಹಿನ್ನಲೆ ಕ್ರೂರಿ ಪತಿಯೊಬ್ಬ ಮಾರಣಾಂತಿಕವಾಗಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಹಲ್ಲೆ ಮಾಡಿದ ಕಿರಾತಕನನ್ನು ಶ್ರೀಕಾಂತ್​ ಎಂದು ಗುರುತಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ತಡರಾತ್ರಿ ಘಟನೆ ನಡೆದಿದ್ದು. ಪಾಲಹಳ್ಳಿಯ ಲಕ್ಷ್ಮೀ ಮತ್ತು ಶ್ರೀಕಾಂತ್  ಇಬ್ಬರು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಶ್ರೀಕಾಂತನ ಕುಟುಂಬಸ್ಥರು ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರವಾಗಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಬಳಿಕ ಶ್ರೀಕಾಂತ್ ಕುಟುಂಬಸ್ಥರು ಪತ್ನಿ ಲಕ್ಷ್ಮಿಗೆ ಮತಾಂತರವಾಗಲು ಕಿರುಕುಳ ನೀಡಲು ಆರಂಭಿಸಿದ್ದರು. ಇದನ್ನೂ ಓದಿ :5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಿರುಚಾಡಿದಕ್ಕೆ ಕೊ*ಲೆ

ಆದರ ಇದಕ್ಕೆ ಒಪ್ಪದ ಲಕ್ಷ್ಮಿ ತನ್ನ ನೋವನ್ನು ಮೈದುನ ರವಿಕಿರಣ ಬಳಿ ತೋಡಿಕೊಂಡಿದ್ದಳು. ಆದರೆ ನಿನ್ನೆ ರಾಜಿ ಪಂಚಾಯತಿ ಮಾಡಲು ಲಕ್ಷ್ಮೀ ಮತ್ತು ಆಕೆಯ ಸಂಬಂಧಿಕರನ್ನು ಪತಿಯ ಕಡೆಯವರು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಲಕ್ಷ್ಮೀ ಮತ್ತು ಆಕೆಯ ಕುಟುಂಬಸ್ಥರ ಮೇಲೆ ರಾಡ್​ನಿಂದ ಹಲ್ಲೆ ನಡೆಸಿದ್ದು. ಲಕ್ಷ್ಮೀ ಆಕೆಯ ತಾಯಿ ಶೃತಿ ಮತ್ತು ಮೈದುನ ರವಿಕಿರಣ್​ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಂತ್ರಸ್ಥರನ್ನು ಶ್ರೀರಂಗಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ :ಭಾಗ್ಯಗಳನ್ನು ಕೊಟ್ಟು, ಬಡವರ ಮನೆ ಹಾಳ್​ ಮಾಡ್ತಿದ್ದಾರೆ : ವಿ. ಸೋಮಣ್ಣ

ಬಲವಂತದ ಮತಾಂತರಕ್ಕೆ ಯತ್ನಿಸಿದ ಶ್ರೀಕಾಂತ್ ಕುಟುಂಬಸ್ಥರ ಕುರಿತು ರವಿಕಿರಣ್​ ಹಿಂದೂ ಸಂಘಟನೆಗಳಿಗೆ ಮಾಹಿತಿ ನೀಡಿದ್ದು. ಹಲ್ಲೆ ನಡೆಸಿದ ಲಕ್ಷ್ಮಿ ಪತಿ ಶ್ರೀಕಾಂತ್, ಆತನ ಅಣ್ಣ ಹರೀಶ್ , ಹರಿಶ್ ಪತ್ನಿ ನಾಗವೇಣಿ, ಅವರ ಮಕ್ಕಳು ಸೇರಿ ಹಲವರ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES