Saturday, April 12, 2025

ಗುಂಡಿಯ ವಿಷ್ಯ, ಬ್ಯಾಡವೋ ಶಿಷ್ಯ; ಹಾಡು ಹೇಳುತ್ತ ಪ್ರತಿಭಟನೆ ಮಾಡಿದ ನಗರವಾಸಿಗಳು

ಬೆಂಗಳೂರು : ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಗೆ ಹಣ ನೀಡುತ್ತಿಲ್ಲ ಎಂಬ ಆರೋಪ ರಾಜ್ಯ ಸರ್ಕಾರದ ವಿರುದ್ದ ನಿರಂತರವಾಗಿ ಕೇಳಿಬರುತ್ತಿದೆ. ಕೆಲ ಸಮಯದಲ್ಲಿ ಪರೋಕ್ಷವಾಗಿ ಸರ್ಕಾರ ಇದನ್ನು ಒಪ್ಪಿಕೊಂಡಿದೆ. ಆದರೆ ಬೆಂಗಳೂರಿನ ಟ್ಯಾಕ್ಸ್​ ಪೇಯರ್ಸ್​ ವಾಸವಾಗಿರುವ ಏರಿಯಾಗಳಲ್ಲಿ ಒಂದಾದ ಮಹದೇವಪುರ ಕ್ಷೇತ್ರದ ಜನರು ಸರ್ಕಾರದ ವಿರುದ್ದ ವಿಭಿನ್ನವಾಗಿ ಹಾಡು ಹೇಳಿ ಪ್ರತಿಭಟನೆ ನಡೆಸಿದ್ದು. ಗುಂಡಿ ಮುಚ್ಚದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಕರಗಕ್ಕೆ ಹಣದ ಕೊರತೆ; ಹಣವಿಲ್ಲದೇ ಬರ್ಬಾದ್​ ಆಯ್ತಾ ಬಿಬಿಎಂಪಿ..?

ಮಹಾದೇವಪುರದ ವಿಧಾನಸಭಾ ಕ್ಷೇತ್ರದ, ಬೆಳೆಗೆರೆ ರಸ್ತೆಯಲ್ಲಿ ಪ್ರತಿಭಟನೆ ನಡೆದಿದೆ. ಅಭಿವೃದ್ದಿಗೆ ಹಣವಿಲ್ಲದೇ ನಗರದ ರಸ್ತೆಗಳಲ್ಲೇ ಗುಂಡಿಮಯವಾಗಿದ್ದು. ಇದರ ವಿರುದ್ದ ಬೆಂಗಳೂರಿನ ಟ್ಯಾಕ್ಸ್​ ಪೇಯರ್ಸ್​ ವಿಭಿನ್ನವಾಗಿ ಹೋರಾಟ ಮಾಡಿದ್ದಾರೆ. “ಗುಂಡಿಯ ವಿಷ್ಯ ಬ್ಯಾಡವೋ ಶಿಷ್ಯ..ಟ್ಯಾಕ್ಸ್ ಸೂಪರ್.. ಆದ್ರೆ ಗುಂಡಿ ಡೆಂಜರ್” ಎಂದು ತಮ್ಮದೇ ಸಾಹಿತ್ಯ ರಚಿಸಿಕೊಂಡು ನೋವಿನ ಹಾಡನ್ನು ಹಾಡಿರುವ ಬೆಂಗಳೂರಿಗರು. ಇದು ಗುಂಡಿಯಿಂದ ಕೈ-ಕಾಲು ಮುರಿದುಕೊಂಡವರಿಂದ ಹುಟ್ಟಿಬಂದ ಸಾಹಿತ್ಯವೆಂದು ಹೇಳಿದ್ದಾರೆ.

ಜೊತೆಗೆ ತಮ್ಮ ಸಮಸ್ಯೆಗಳನ್ನು ಟೀಶರ್ಟ್​ಗಳ ಮೇಲೆ ಪ್ರಿಂಟ್​ ಮಾಡಿಸಿದ್ದು. ಒಕ್ಕೊರಳಿನಿಂದ ಹಾಡ ಹೇಳಿ, ಗುಂಡಿ ಪೂಜೆ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES