Sunday, April 13, 2025

ವೃತ್ತ ಬರೆದು, ಕನ್ನಡಿಗರು ನನ್ನ ಹೃದಯದಲ್ಲಿದ್ದಾರೆ ಎಂದು ಸಂದೇಶ ನೀಡಿದ ಕನ್ನಡಿಗ ರಾಹುಲ್​

ಬೆಂಗಳೂರು : ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗೆದ್ದು ಬೀಗಿದೆ. ಆರ್​ಸಿಬಿ ನೀಡಿದ ಸುಲಭ ಮೊತ್ತವನ್ನು ಬೆನ್ನತ್ತಿದ ಡಿಸಿ ತಂಡ ಕೇವಲ 17.5 ಓವರ್​ಗಳಲ್ಲಿ ಗುರಿಯನ್ನು ಬೇದಿಸಿತು. ಆದರೆ ಈ ಪಂದ್ಯದ ಕೊನೆಯವರೆಗಿದ್ದು ಪಂದ್ಯ ಗೆಲ್ಲಿಸಿದ ಕನ್ನಡಿಗ ಕೆ.ಎಲ್​ ರಾಹುಲ್​ ಮೈದಾನದಲ್ಲಿ ವೃತ್ತ ಬರೆಯುವ ಮೂಲಕ ಇದು ನನ್ನ ನೆಲ. ಇಲ್ಲಿರೊದೆಲ್ಲಾ ನನ್ದೆ ಎಂದು ತೋರಿಸಿದ್ದು ವಿಶೇಷವಾಗಿತ್ತು.

ಟಾಸ್ ಸೋತು ಕಣಕ್ಕೆ ಇಳಿದ ಆರ್​ಸಿಬಿ ಉತ್ತಮ ಆರಂಭ ಕಂಡಿತು. ಒಂದೇ ಓವರ್​ನಲ್ಲಿ ಫಿಲಿಪ್ ಸಾಲ್ಟ್ 30ರನ್ ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ಕೊಟ್ಟರು. 37 ರನ್ ಗಳಿಸಿರುವಾಗ ಸಾಲ್ಟ್ ರನೌಟ್​ಗೆ ಬಲಿಯಾದರು. ನಂತರ ಸ್ಕ್ರೀಸ್​ನಲ್ಲಿ ಕಚ್ಚಿಕೊಂಡಿದ್ದ ವಿರಾಟ್​ ಕೊಹ್ಲಿ ಕೂಡ ದೊಡ್ಡ ಮೊತ್ತವನ್ನು ಕಲೆಹಾಕದೆ 22 ರನ್​ಗೆ ಔಟದರು. ನಂತರ ಬಂದ ಎಲ್ಲಾ ಆರ್​ಸಿಬಿ ಬ್ಯಾಟ್ಸಮನ್​ಗಳು ಪೆವಿಲಿಯನ್​ ಪರೇಡ್​ ಆರಂಭಿಸಿದರು. ಕೊನೆಯಲ್ಲಿ ಕೆಲ ಕಾಲ ಬಿರುಸಿನ ಬ್ಯಾಟ್​ ಬೀಸಿದ ಟಿಮ್​ ಡೇವಿಡ್​ 37 ರನ್​ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಡೆಲ್ಲಿ ತಂಡಕ್ಕೆ 167 ರನ್​ಗಳ ಗುರ ನೀಡಿತು.

 

View this post on Instagram

 

A post shared by Star Sports India (@starsportsindia)

ಇದನ್ನೂ ಓದಿ :42ನೇ ವಯಸ್ಸಿನಲ್ಲಿ PUC ಪರೀಕ್ಷೆ ಪಾಸ್​ ಮಾಡಿ ಮಾದರಿಯಾದ ಗೃಹಿಣಿ

ಸುಲಭ ಗುರಿಯನ್ನು ಬೆನ್ನತ್ತಿದ ಡೆಲ್ಲಿಗೆ ಆರ್​ಸಿಬಿ ಬೌಲರ್​ಗಳು ಆರಂಭಿಕ ಆಘಾತ ನೀಡಿದರು. ಕೇವಲ 58ರನ್​ಗಳಿಗೆ 4 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡಕ್ಕೆ ರಾಹುಲ್​ ಆಸರೆಯಾದರು. ಕೇವಲ 53 ಎಸೆತ ಎದುರಿಸಿದ ರಾಹುಲ್​ 6 ಸಿಕ್ಸರ್​ ಮತ್ತು 7 ಬೌಡರಿ ಸಹಿತ 93ರನ್​ಗಳನ್ನು ಕಲೆಹಾಕಿ, ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಕೊನೆಯಲ್ಲಿ ಸಿಕ್ಸರ್​ ಸಿಡಿಸುವ ಮೂಲಕ ಪಂದ್ಯ ಮುಗಿಸಿದ ರಾಹುಲ್​ ಸೆಲಬ್ರೇಷನ್​ ಎಲ್ಲರ ಗಮನ ಸೆಳೆಯಿತು. ಮೈದಾನದಲ್ಲಿ ಬ್ಯಾಟ್​ ಮೂಲಕ ವೃತ್ತ ಬರೆಯುವ ಮೂಲಕ ಇದು ನನ್ನ ಟೆರಿಟೆರಿ ಎಂದು, ನಾನು ಇಲ್ಲಿಯವನು, ಬೆಂಗಳೂರು ನನ್ನ ಹೃದಯದಲ್ಲಿದೆ ಎಂದು ಸನ್ನೆ ಮಾಡಿ ತೋರಿಸಿದರು.

ಇದನ್ನೂ ಓದಿ : ಮರಗೆಲಸಕ್ಕೆ ಬಂದಿದ್ದ ಇಬ್ಬರು ಯುವಕರು ವಿದ್ಯುತ್​ ತಂತಿ ತಗುಲಿ ಸಾ*ವು

ರಾಹುಲ್​​ನ ಈ ಸೆಲಬ್ರೇಷನ್​ಗೆ ಕನ್ನಡಿಗರು ಫಿದಾ ಆಗಿದ್ದು. ಆರ್​ಸಿಬಿ ಮ್ಯಾನೆಜ್​ಮೆಂಟ್​ ವಿರುದ್ದ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಅನೇಕ ವರ್ಷಗಳಿಂದ ರಾಹುಲ್​ನನ್ನು ಬೆಂಗಳೂರು ತಂಡ ಖರೀದಿಸಬೇಕು ಎಂದು ಜನರು ಇಚ್ಚೇಯನ್ನು ವ್ಯಕ್ತಪಡಿಸುತ್ತಿದೆ. ಆದರೆ ಆರ್​ಸಿಬಿ ಮ್ಯಾನೆಜ್​ಮೆಂಟ್​ ಮಾತ್ರ ಇವರನ್ನು ಖರೀದಿಸುವ ಗೋಜಿಗೆ ಹೋಗಿಲ್ಲ. ಜೊತೆಗೆ ಮಾಜಿ ಆರ್​ಸಿಬಿ ಆಟಗಾರ ಅನಿಲ್​ ಕುಂಬ್ಳೆ ಕೂಡ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುವುದಿಲ್ಲ ಎಂದು ತಣ್ಣಗೆ ತಮ್ಮ ಅಸಮಧಾನ ಹೊರಹಾಕಿದ್ದರು.

RELATED ARTICLES

Related Articles

TRENDING ARTICLES