ಮೈಸೂರು : ಕಾಲುವೆಯಲ್ಲಿ ಕೈತೊಳೆಯಲು ಹೋಗಿದ್ದ ಮೂರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ನೆನ್ನೆ ಸಂಜೆ 5 ಗಂಟೆಗೆ ವಿಸಿ ನಾಲೆ ಬಳಿ ಘಟನೆ ನಡೆದಿದೆ. ಮೃತ ಮಕ್ಕಳನ್ನು 16 ವರ್ಷದ ಸೋನು, 15 ವರ್ಷದ ಸಾಯಿಸ್ತಾ ಮತ್ತು 10 ವರ್ಷದ ಸಿದ್ದಿಕ್ ಎಂದು ಗುರುತಿಸಲಾಗಿದೆ.
ಮೈಸೂರಿನ ಹೌಸ್ಯ ನಗರದ ನಿವಾಸಿಗಳಾದ ಮಕ್ಕಳು. ಕೆಆರ್ಎಸ್ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ನೆನ್ನೆ ಸಂಜೆ 5 ಗಂಟೆ ವೇಳೆಗೆ ವಿಸಿ ನಾಲೆ ಬಳಿಗೆ ಕೈ ತೊಳೆಯಲು ಎಂದು ಹೋಗಿದ್ದ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ. ಮೃತರ ಪೈಕಿ ಸಾಯಿಸ್ತಾ ಎಂಬ ಬಾಲಕಿ ಇತ್ತೀಚೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದರು.
ಇದನ್ನೂ ಓದಿ :1200 ರೂಪಾಯಿ ಇದ್ದ ಗ್ಯಾಸ್ ರೇಟ್ನ್ನ ಮೋದಿ 850ರೂಗೆ ಕಡಿಮೆ ಮಾಡಿದ್ದಾರೆ; ಪ್ರತಾಪ್ ಸಿಂಹ
ಮೃತದೇಹಗಳನ್ನು ನೀರಿನಿಂದ ಮೇಲೆತ್ತಿ ಶವಗಾರಕ್ಕೆ ರವಾನಿಸಿದ್ದು. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.