Thursday, April 17, 2025

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್​ಗೆ ಖಡಕ್ ಸೂಚನೆ ಕೊಟ್ಟ ನ್ಯಾಯಾಧೀಶರು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ನಟ ದರ್ಶನ್​ ಗೈರಾಗಿದ್ದು ನಡೆಸಿದ್ದು.​ ಬೆನ್ನು ನೋವಿನ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಈ ಕುರಿತು ನ್ಯಾಯಾಧೀಶರು ದರ್ಶನ್​ ಪರ ವಕೀಲರಿಗೆ ಸೂಚನೆ ನೀಡಿದ್ದು. ವಿಚಾರಣೆಗೆ ತಪ್ಪಿಸಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ ಹಾಗೂ ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿ ಪಡಿಸಲಾಗಿದೆ.

57ನೇ ಸಿಸಿಹೆಚ್​ ನ್ಯಾಯಾಲಯದಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ  ನಡೆಯುತ್ತಿದ್ದು. ಪ್ರಕರಣದ ವಿಚಾರಣೆಗೆ ಆರೋಪಿ ದರ್ಶನ್​ ಗೈರಾಗಿದ್ದಾರೆ. ಆದರೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ನ್ಯಾಯಾಧೀಶ. ಜೈ ಶಂಕರ್​ ಅವರ ಮುಂದೆ ಹಾಜರಾಗಿದ್ದಾರೆ. ಎಲ್ಲಾ ಆರೋಪಿಗಳ ಹೆಸರನ್ನು ಕೂಗಿ ಹಾಜರಾತಿಯನ್ನು ಖಚಿತಪಡಿಸಿಕೊಂಡ ನ್ಯಾಯಾಧೀಶರು. ದರ್ಶನ್​ಗೆ ವಿಚಾರಣೆಗೆ ಗೈರಾಗದಂತೆ ದರ್ಶನ್​ ಪರ ವಕೀಲರಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಸಾಲಭಾದೆ; ಪುಟಾಣಿ ಮಕ್ಕಳಿಬ್ಬರನ್ನು ಅನಾಥವಾಗಿಸಿ ದಂಪತಿ ಆತ್ಮಹ*ತ್ಯೆ

ಜಾಮೀನು ಷರತ್ತು ಸಡಿಲಿಕೆ ಹೈಕೋರ್ಟ್ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು. ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್​ಗಳನ್ನು ರಿಲೀಸ್ ಮಾಡುವಂತೆ ಕೆಲ ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲ ಈ ಎಲ್ಲಾ ಅರ್ಜಿಯನ್ನು ಪುರಸ್ಕರಿಸಿದ್ದು. ಮುಂದಿನ ವಿಚಾರಣೆಯನ್ನು ಮೇ.20ಕ್ಕೆ ಮುಂದೂಡಿದೆ.

RELATED ARTICLES

Related Articles

TRENDING ARTICLES