ಕೋಲಾರ : ಯುಗಾದಿಯ ಹೊಸತೊಡಕಿಗೆ ಎಂದು ಮಟನ್ ಚೀಟಿ ಹಾಕಿದ್ದ ಜನರಿಗೆ ವ್ಯಕ್ತಿಯೋರ್ವ ಪಂಗನಾಮ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದ್ದು. ಸುಮಾರು ನಾಲ್ಕೈದು ಸಾವಿರ ಜನರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೋಲಾರದ ಬಂಗಾರಪೇಟೆಯಲ್ಲಿ ಈ ಗೋಲ್ ಮಾಲ್ ನಡೆದಿದ್ದು. ಭರತ್ ಎಂಬಾತ ಯುಗಾದಿ ಹೊಸತೊಡಕಿಗೆ ಎಂದು ಜನರ ಬಳಿಯಲ್ಲಿ ಮಾಂಸದ ಚೀಟಿ ಹಾಕಿಸಿಕೊಂಡಿದ್ದನು. ಸುಮಾರು ನಾಲ್ಕೈದು ಸಾವಿರ ಜನರ ಬಳಿಯಲ್ಲಿ ತಲಾ ಎರಡು ಸಾವಿರ ಸಂಗ್ರಹಿಸಿರುವ ಭರತ್ ಇಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದಾನೆ.
ಇದನ್ನೂ ಓದಿ :ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಹಿಡಿಯೋದಿಲ್ಲ: ಯತ್ನಾಳ್
ಇಂದು ಬೆಳಿಗ್ಗೆ ಜನರು ಮಾಂಸ ಪಡೆಯಲು ಎಂದು ಅಂಗಡಿ ಮುಂದೆ ಜಮಾಯಿಸಿದ್ದು. ಭರತ್ ಇಲ್ಲದ್ದನ್ನು ಕಂಡು ಭರತ್ಗೆ ಕರೆ ಮಾಡಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಜನರಿ ಟೋಕನ್ ಹಿಡಿದುಕೊಂಡು ಅಂಗಡಿ ಎದರು ಭರತ್ಗೆ ಹಿಡಿಶಾಪ ಹಾಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಯುಗಾದಿಯ ಹೊಸತೊಡಕಿನಂದು ಮಾಂಸ ಸೇವಿಸುವ ಆಸೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ.