ದಾವಣಗೆರೆ : ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟುತ್ತೇನೆ ಎಂಬ ವಿಚಾರದ ಕುರಿತು ಮಾಜಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು. ಒಂದು ವೇಳೆ ಯತ್ನಾಳ್ ಹೊಸ ಪಕ್ಷ ಕಟ್ಟಿಗೆದ್ದು ಬಂದರೆ ನಾನೇ ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಯತ್ನಾಳ್ ವಿರುದ್ದ ಕಿಡಿಕಾರಿದ್ದು.
‘ಯತ್ನಾಳ್ ಪಕ್ಷ ಕಟ್ಟಿದ್ರೆ ಸಂತೋಷ, ಬಿಎಸ್ವೈನ ಟೀಕೆ ಮಾಡಿದ್ರೆ ಸಿಎಂ ಆಗಲ್ಲಾ. ನೀವೂ ಸ್ವಯಂ ಘೋಷಿತ ನಾಯಕರಾಗಬೇಡಿ, ಜನ ಮೆಚ್ಚಿದ ನಾಯಕರಾಗಬೇಕು. ರಾಜೀನಾಮೇ ಕೊಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿ ಹೆದ್ದು ಬಂದರೆ, ಹಿಂದು ಹುಲಿಗೆ ಸನ್ಮಾನ ಮಾಡುತ್ತೇವೆ. ಯತ್ನಾಳ್ಗೆ ಠೇವಣಿಯೂ ಸಿಗಲ್ಲಾ, 224 ಕ್ಷೇತ್ರಗಳಲ್ಲು ಅವರು ಅಡ್ರೆಸ್ಗೆ ಇಲ್ಲದಂತೆ ಆಗ್ತಾರೆ ಎಂದು ಹೇಳಿದರು.
ಇದನ್ನೂ ಓದಿ :ಮಟನ್ ಚೀಟಿ ಗೋಲ್ಮಾಲ್, ಹೊಸತೊಡಕಿನ ಸಂಭ್ರಮದಲ್ಲಿದ್ದ ಜನರಿಗೆ ಪಂಗನಾಮ
ಯತ್ನಾಳ್ ಹಿಂದೂ ಪಕ್ಷ ಕಟ್ಟ್ತೀನಿ ಎಂದು ಹೇಳಿದ್ದಾರೆ, ಅಂದರೆ ನಾವ್ಯಾರು ಹಿಂದೂಗಳಲ್ವಾ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳೋಕೆ ಯತ್ನಾಳ್ ಏಕಪಾತ್ರಭಿಯನ ಮಾಡ್ತಾರೆ. ಹಿಂದೂ ಹುಲಿ ಎಂದು ತಮ್ಮನ್ನು ತಾವು ಪ್ರಚಾರ ಮಾಡಿಕೊಂಡಿದ್ದಾರೆ. ಅವರ ಕುರಿತು ಸಮಯ ಬಂದಾಗ ಎಲ್ಲವೂ ತಿಳಿಯುತ್ತೆ. ಹಿಂದುತ್ವ ಎಂದು ಜೆಡಿಎಸ್ಗೆ ಯಾಕೆ ಹೋಗಿದ್ದೀರಿ, ಟಿಪ್ಪು ಅವತಾರ ಯಾಕೆ ತಾಳಿದ್ದೀರಿ. ಇಫ್ತಾರ್ ಕೂಟದಲ್ಲಿ ಯಾಕೆ ಭಾಗಿಯಾಗಿದ್ರಿ. ನೀವು ಹಿಂದೂ ಹುಲಿ ಅಲ್ಲ, ಇಲಿ.
ಆಚಾರದಲ್ಲಿ ಹಿಂದುತ್ವ ಇರಬೇಕು, ಪ್ರಚಾರದಲ್ಲಿ ಅಲ್ಲ, ಬಿಎಸ್ವೈ ಮಠ ಮಾನ್ಯಗಳಿಗೆ ಹಣ ಕೊಟ್ರು ಯತ್ನಾಳ್ ನಕಲಿ ಹಿಂದೂ. ಬಿಜಾಪುರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಗೊತ್ತಿದೆ. ಅವರ ಹರಕು ಬಾಯಿಯಿಂದ ಈ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋಕೆ ನೀವೆ ಕಾರಣ. ನೀವು ಬಿಎಸ್ವೈ ಕಾಲು ಹಿಡಿದ ಆಡಿಯೋ ವಿಡಿಯೋ ಬಿಡುಗಡೆ ಮಾಡ್ಬೇಕ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದರು.