Tuesday, April 1, 2025

ಭೀಕರ ರಸ್ತೆ ಅಪಘಾತ; ಹಬ್ಬಕ್ಕೆ ಮನೆಗೆ ತೆರಳುತ್ತಿದ್ದ ಮೂವರು ಸಾ*ವು..!

ಚಿತ್ರದುರ್ಗ : ಟಿಟಿ ವಾಹನ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು.ಯುಗಾದಿ ಹಬ್ಬಕ್ಕೆ ಎಂದು ಮನೆಗೆ ತೆರೆಳುತ್ತಿದ್ದ ಮೂವರು ಮಸಣಕ್ಕೆ ಸೇರಿದ್ದಾರೆ.

ಯುಗಾದಿ ಹಬ್ಬದ ಹಿನ್ನಲೆ ಒಂದೇ ಕುಟುಂಬದ 8 ಜನ ಟಿಟಿಯಲ್ಲಿ ಸ್ವಗ್ರಾಮವಾದ ಚಳ್ಳಕೆರೆ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಿತ್ರದುರ್ಗದ ಹೆಗ್ಗರೆ ಗೇಟ್​ ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕುಮಾರನಾಯ್ಕ(45), ಶ್ವೇತ (38), ಶಂಕ್ರಿ ಬಾಯಿ(65) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ :ಯುಗಾದಿ ಸಂಭ್ರಮದಲಿದ್ದ ಮನೆಯಲ್ಲಿ ಸೂತಕದ ಛಾಯೆ; ಮೂವರು ಸಾ*ವು..!

ಮೃತರೆಲ್ಲರೂ ಕೂಲಿ ಕೆಲಸಕ್ಕೆ ಎಂದು ಬೆಂಗಳೂರಿಗೆ ಬಂದಿದ್ದರು. ಹಬ್ಬಕ್ಕೆ ಎಂದು ಟಿಟಿ ಬಾಡಿಗೆ ಮಾಡಿಕೊಂಡು ಸ್ವಗ್ರಾಮಕ್ಕೆ ತೆರೆಳುತ್ತಿದ್ದ ವೇಳೆ ದುರಂತ ಸಂಭವಿಸಿದ್ದು. ಘಟನಾ ಸ್ಥಳಕ್ಕೆ ಚಳ್ಳಕರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES